ಹುಕ್ಕೇರಿ : ನಿಡಸೋಶಿ ದುರುದುಂಡೇಶ್ವರ ಮಠದ ಪಟ್ಟಕ್ಕಾಗಿ ನಡೆದಿರುವ ತಿಕ್ಕಾಟ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.
ನಿನ್ನೆಯಷ್ಟೆ ಲಿಂಗಾಯತ ಸಮಾಜದ ಮುಖಂಡರು ಬೆಳಗಾವಿಯಲ್ಲಿ ಸಭೆ ಮಾಡಿ ಬಳಿಕ ಶ್ರೀ ಮಠಕ್ಕೆ ಆಗಮಿಸಿ ಮಠದ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮೀಜಿಗಳು ಪಟ್ಟಕ್ಕಾಗಿ ಒಂದು ತಿಂಗಳಿನಿಂದ ನಡೆಸುತ್ತಿದ್ದ ಆಮರಣಾಂತ ಉಪವಾಸ ಬಿಡಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ನೂರಾರು ಭಕ್ತರು ಮಠಕ್ಕೆ ಆಗಮಿಸಿ ಹಿರಿಯ ಪಂಚಮಶಿವಲಿಂಗೇಶ್ವರ ಶ್ರೀಗಳನ್ನ ಭೇಟಿಯಾಗಿ ಯಾವುದೇ ಕಾರಣಕ್ಕೂ ಕಿರಿಯ ಶ್ರೀಗಳಿಗೆ ಮಠದ ಸಂಪ್ರದಾಯ ಮುರಿದು ಪಟ್ಟಾಭಿಷೇಕ ಮಾಡಬಾರದು ಎಂದು ಲಿಖಿತ ಮನವಿ ಮಾಡಿದ್ದರು.
ಭಕ್ತರ ಮನವಿ ಬಳಿಕ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮೀಜಿ ಹಿರಿಯ ಶ್ರೀಗಳಾದ ಪಂಚಮಶಿವಲಿಂಗೇಶ್ವರ ಶ್ರೀ ಗಳನ್ನ ಭೇಟಿಯಾಗಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

ಮೇ 18 ರಂದು ದುಬೈ ದೇಶದಲ್ಲಿ ಆಯೋಜನೆ ಮಾಡಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದುಬೈಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ನಿಜಲಿಂಗೇಶ್ವರ ಶ್ರೀಗಳು ಹಿರಿಯ ಶ್ರೀಗಳನ್ನ ಭೇಟಿಯಾಗಿ ಅವರಿಂದ ಸತ್ಕಾರ ಸ್ವೀಕರಿಸಿ ದುಬೈಗೆ ತೆರಳಿದ್ದಾರೆ.
ಮೇ 18 ರಂದು ದುಬೈ ಜೆ ಎಸ್ ಎಸ್ ಪಿ ಎಸ್ ಅಲ್ ಸಫಾ ದಲ್ಲಿ ಆಯೋಜನೆ ಮಾಡಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಲಿದ್ದಾರೆ.
