
ಚಿಕ್ಕೋಡಿ : ತಾಲೂಕಿನ ಅಂಕಲಿ ಗ್ರಾಮದ ಕೃಷ್ಣ ನದಿಯಲ್ಲಿ ಬೃಹತ್ತಾದಾಕಾರ ಮೀನು ಮೀನುಗಾರನ ಬಲೆಗೆ ಬಿದ್ದಿದೆ.

ಸ್ಥಳಿಯ ಮೀನುಗಾರ ಸಾಗರ ಎಂಬುವವರು ಮಂಗಳವಾರ ನದಿ ದಡದಲ್ಲಿ ಮೀನು ಹಿಡಿಯುವಾಗ ಸುಮಾರು 20 ಕೆಜಿ ತೂಕದ ಅಪರೂಪದ ಬಾಳಿ ಮೀನು ಸೆರೆಯಾಗಿದೆ.

ಪಶ್ಚಿಮ ಘಟ ಪ್ರದೇಶದಲ್ಲಿ ಹಾಗು ಜಿಲ್ಲೆಯಲ್ಲಿ ನಿರಂತರ ಮಳೆಗೆ ಕೃಷ್ಣ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು,ನದಿಯಲ್ಲಿ ಅಪರೂಪದ ಬೃಹತ್ ಆಕಾರದ ಮೀನು ತೇಲಿ ಬಂದಿದ್ದು,ಮೀನುಗಾಗರ ಬಲೆಗೆ ಮೀನು ಸೆರೆಯಾಗಿದೆ.
