ಹುಕ್ಕೇರಿ : ನಿಡಸೋಶಿ ದುರದುಂಡೇಶ್ವರ ಮಠದ ಪಟ್ಟಕ್ಕಾಗಿ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವಿನ ತಿಕ್ಕಾಟಕ್ಕೆ ಸಧ್ಯಕ್ಕೆ ಅಲ್ಪ ವಿರಾಮ ಬಿದ್ದಿದೆ.

ಬೆಳಗಾವಿ ಜಿರಗೆ ಸಭಾ ಭವನದಲ್ಲಿ ಲಿಂಗಾಯತ ಸಮಾಜದ ಮುಖ‌ಂಡ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ನಡೆದ ಸಭೆ ಯಾವುದೇ ನಿರ್ಣಯಕ್ಕೆ ಬರದ ಕಾರಣ ಕಿರಿಯ ಶ್ರೀಗಳ ಆಮರಣಾಂತ ಉಪವಾಸ ಬಿಡಿಸಲು ಎಲ್ಲ ಮುಖಂಡರು ತೀರ್ಮಾನಿಸಿ ನಿಡಸೋಶಿ ದುರುದುಂಡೇಶ್ವರ ಮಠದತ್ತ ಧಾವಿಸಿದ್ದರು. ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ಎ ಬಿ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ ಸೇರಿದಂತೆ ಎಲ್ಲ‌ ಮುಖಂಡರು ದುರದುಂಡೇಶ್ವರ ಮಠದತ್ತ ಆಗಮಿಸಿ ಇದು ದಾಸೋಹ ಮಠ ಉಪವಾಸ ಮಾಡುವದು ಸರಿಯಲ್ಲ ಎಂದು ಕಿರಿಯ ನಿಜಲಿಂಗೇಶ್ವರ ಶ್ರೀಗಳ ಮನವೊಲಿಸಿ ಹಣ್ಣಿನ ರಸ ಕುಡಿಸುವದರ ಮೂಲಕ ಉಪವಾಸನ್ನ ಅಂತ್ಯಗೊಳಿಸಿದರು. ಬಳಿಕ ಹಿರಿಯ ಶ್ರೀಗಳ ಜೋತೆಗೂ ಚರ್ಚಿಸಿದರು.

ಹಿರಿಯ ಶ್ರೀಗಳಾದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಶ್ರೀಗಳ ನ್ಯಾಯವನ್ನ ಇತ್ಯರ್ಥ ಮಾಡಲು ಮೇ 21 ರಂದು ಇನ್ನೊಂದು ಸಭೆ ನಡೆಸಿ ತೀರ್ಮಾನ ಮಾಡಲು ಮುಖಂಡರು ಮುಂದಾಗಿದ್ದಾರೆ.
.