ಹುಕ್ಕೇರಿ: ಮುಸ್ಲಿಂರನ್ನ ಆರ್ಥಿಕವಾಗಿ ಬಹಿಷ್ಕರಿಸುವಂತೆ ಭಜರಂಗದಳದ ಉತ್ತರ ಕರ್ನಾಟಕ ಪ್ರಮುಖ ಲಕ್ಷ್ಮಣ ಮಿಶಾಳೆ ಅವರು ಕರೆ ನೀಡಿದ್ದಾರೆ.
ಪಹಲಗಾಮ್ ಉಗ್ರರ ದಾಳಿ ಖಂಡಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಮುಸ್ಲಿಂರನ್ನ ಹಿಂದೂಗಳು ಆರ್ಥಿಕವಾಗಿ ಬಹಿಷ್ಕಾರ ಮಾಡಬೇಕು.ಹಿಂದೂಗಳು ಮುಸ್ಲಿಂರಿಂದ ವ್ಯವಹಾರ ಮಾಡಿದರೇ ಮಾತ್ರ ಭಯೋತ್ಪಾಕರು ಚಡ್ಡಿ ಕಳೆದು ಹಿಂದೂಗಳಾಗುತ್ತಾರೆ. ಹಿಂದೂಗಳು ಜಾತಿ ಬೇಧ ಮರೆತು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಬಳಿಕ ಮಾತನಾಡಿದ ಕ್ಯಾರಗುಡ್ಡದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀ ಮಾತನಾಡಿ ಧರ್ಮ ಕೇಳಿ ಕೊಲೆ ಮಾಡಿದಂತೆ ನಮ್ಮ ಸೈನಿಕರು ಧರ್ಮ ಕೇಳಿ ಗುಂಡು ಹಾರಿಸಬೇಕು. ನಮ್ಮ ಸೇನೆ 25 ಸಾವಿರ ಜಿಹಾದಿಗಳನ್ನ ಕೊಲೆ ಮಾಡುವ ವಿಶ್ವಾಸವಿದೆ ಎಂದರು
ಪಟ್ಟಣದ ಅಡವಿಸಿದ್ಧೇಶ್ವರ ಮಠದಿಂದ ಕೋರ್ಟ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಪಾಕಿಸ್ತಾನ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮೃತರಿಗಾಗಿ ಮಾನವ ಸರಪಳಿ ನಿರ್ಮಿಸಿ ಮೌನಾಚರಣೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.
ರಾಮಸೇನೆ ಮುಖಂಡರಾದ ಶಿವರಾಜ ಅಂಬಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ವಿರಕ್ತಮಠದ ಶಿವಬಸವ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶಿವರಾಜ ನಾಯಿಕ, ವಿವೇಕ ಪುರಾಣಿಕ, ಗುರು ಕುಲಕರ್ಣಿ, ಪರಗೌಡ ಪಾಟೀಲ, ಸುಹಾಸ ನೂಲಿ, ಅಪ್ಪುಶ್ ತುಬಚಿ, ರಾಜು ಅಂಕಲೆ, ರಾಹುಲ ಅಂಕಲೆ, ರಾಜು ಮುನ್ನೋಳಿ, ಮಾರುತಿ ಬೆನ್ನಾಡಿ, ಮಾಂತು ಬೇಟಗೇರಿ, ಶಂಕರ ಪಟ್ಟಣಶೆಟ್ಟಿ, ಗವೀಶ ರವದಿ, ಚನ್ನಪ್ಪ ಗಜಬರ, ವಿರೇಶ ಗಜಬರ ಸೇರಿದಂತೆ ಹಲವರು ಭಾಗಿಯಾಗಿದ್ದರು.