ಚಿಕ್ಕೋಡಿ: ನಾನು ಸಿಎಂ ಇರುವಾಗ ಎಲ್ಲರಿಗೂ ಸಮಾನತೆ ತರಬೇಕು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಅಧಿಕಾರ ಹಂಚಿಕೆ ಮಾಡಬೇಕು. ಸಮಾನ ಸಂಪತ್ತು ಹಂಚಿಕೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಚಿಕ್ಕೋಡಿ ಪಟ್ಟಣದ ಆರ್ ಡಿ ಮೈದಾನದಲ್ಲಿ ಆಯೋಜಿಸಿದ್ದ ಗೊಲ್ಲ, ಯಾದವ, ಹಣಬರ ಸಂಘದ ಶತಮಾನೋತ್ಸವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಹಿಂದುಳಿದ ವರ್ಗ, ದಲಿತರು ಅಲ್ಪ ಸಂಖ್ಯಾತರು ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಣ ಸಂಘಟನೆ ಹೋರಾಟದ ಬಗ್ಗೆ ಅಂಬೇಡ್ಕರ ಹೇಳಿದರು.ಕೆಲವರು ಮಾತ್ರ ಮುಂದೆ ಹೋಗಿದ್ದಾರೆ. ಬಹು ಸಂಖ್ಯಾತ ಜನರು ಅಕ್ಷರದಿಂದ ದೂರು ಇರುವ ಕಾರಣ ಹಿಂದೆ ಇದ್ದಾರೆ. ನಾವೆಲ್ಲ ಶೂದ್ರರು, ಗಣೇಶ ಹುಕ್ಕೇರಿ, ಅಶೋಕ ಪಟ್ಟಣ, ರಾಜು ಕಾಗೆ ನೀವೆಲ್ಲ ಶೂದ್ರರು. ಶೂದ್ರ ಬಿಟ್ಟು ಮೇಲಿನ ವರೆಗೆ ಕಲಿಯುವ ಅವಕಾಶ ಇತ್ತು.ಶೂದ್ರರಿಗೆ ಅವಕಾಶ ಇರಲಿಲ್ಲ.ಮೇಲಿನ ಅವರು ಮುಂದೆ ಹೋದರು, ಉಳಿದವರು ಹಿಂದೆ ಉಳಿದರು. ಬಾಬಾಸಾಹೇಬ್ ಅಂಬೇಡ್ಕರ ಭಾಷಣದಲ್ಲಿ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ, ಶೈಕ್ಷಣಿಕ ಅಸಮಾನತೆ ಕಾಲಕ್ಕೆ ಕಾಲಿಡುತ್ತಿದ್ದೇವೆ ಎಂದು ಹೇಳಿದ್ದರು.

ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ನಮಗೆ ಸಿಕಿಲ್ಲ.ಇವು ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಈ ಅಸಮನಾತೆ ಮುಂದುವರೆದರೇ ಅವರೇ ಸ್ವಾಂತಂತ್ರ ಸೌಧ ನಾಶ ಮಾಡುತ್ತಾರೆ ಎಂದು ಬಾಬಾಸಾಹೇಬ ಅಂಬೇಡ್ಕರ ಹೇಳಿದ್ದರು.
ಸ್ವಾಮೀಜಿಗಳು ಮೂರು ಮಂತ್ರ ನೆನಪಿಟ್ಟುಕೊಳ್ಳಬೇಕು.ಶಿಕ್ಷಣ ಸಂಘಟನೆ ಹೋರಾಟ ಮಂತ್ರ ನೆನಪಿಟ್ಟುಕೊಳ್ಳಬೇಕು. ದಲಿತರ ವಿವೋಚನೆ, ಅಲ್ಪ ಸಂಖ್ಯಾತರ ವಿಮೋಚನೆ ಆದರೇ ಸಾಲದು.
ಎಲ್ಲ ಜಾತಿಯ ಬಡವರಿಗೂ ಅವಕಾಶ ಸಿಗುವ ಹೋರಾಟ ಮಾಡಬೇಕು. ಒದದೇ ಇದ್ದರೇ ಗುಲಾಮಗಾರಿತನ ಬರುತ್ತೆ ಸ್ವಾಭಿಮಾನ ಇರಲ್ಲ. ನಾನು ಸಿಎಂ ಆಗಿದ್ದು ನನ್ನ ವಿದ್ಯೆಯಿಂದ. ಸ್ವಾತಂತ್ರ್ಯ ಪೂರ್ವದಲ್ಲಿ ಮನಸ್ಮೃತಿ ಇತ್ತು. ಗೊಲ್ಲರು ಹಾಲು ಕರಿಯಬೇಕಾ ನಾನು ಕುರಿ ಕಾಯಕೊಂಡೇ ಇರಬೇಕಿತ್ತಾ..?ಕುರಬರು ಗೊಲ್ಲರು ಒಂದೇ ವರ್ಗಕ್ಕೆ ಸೇರಿದವರು. ಗೊಲ್ಲ ಸಮಾಜಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ.ಶ್ರೀ ಕೃಷ್ಣ ಜಯಂತಿ ಪ್ರಾರಂಭ ಮಾಡಿದ್ದು ನಾನು. ಜಾತಿಗಳು ನಿರ್ಮಾಣವಾಗಿದ್ದು ವೃತ್ತಿಯಿಂದ.ದಯಯೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವದಯ್ಯ ಎಂದು ಸಿಎಂ ಭಾಷಣ ಮುಗಿಸಿದರು.