ಹುಕ್ಕೇರಿ : ಕತ್ತಿ ಕುಟುಂಬಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಇತ್ತಿಚೇಗಷ್ಟೇ ಹೀರಣ್ಯಕೇಶಿ ಆಡಳಿತ ಮಂಡಳಿ ಸದಸ್ಯರು ಕತ್ತಿ ಕುಟುಂಬ ಬಿಟ್ಟು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬೆಂಬಲಿಸಿ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಆಡಳಿತ ಚುಕ್ಕಾಣಿಯನ್ನ ಕತ್ತಿ ಕುಟುಂಬದಿಂದ ಕಸಿದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 11 ಜನ ಸದಸ್ಯರು ಕತ್ತಿ ಕುಟುಂಬದ ಬೆಂಬಲಿತ ಹಾಲಿ ಅಧ್ಯಕ್ಷ ಕಲಗೌಡ ಪಾಟೀಲ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದಾರೆ. ಸಂಘದ ಸದಸ್ಯರಾದ ಅಶೋಕ ಚಂದಪ್ಪಗೋಳ, ಕುನಾಲ ಪಾಟೀಲ, ಜಯಗೌಡ ಪಾಟೀಲ, ರವಿ ಹಿಡಕಲ್, ಬಸಗೌಡ ಮಗೆಣ್ಣವರ, ಸೋಮಲಿಂಗ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೋದೆ, ವಿಷ್ಣು ರೇಡೆಕರ ಸೇರಿ ಒಟ್ಟು 11 ಜನ ಸಂಘದ ಸದಸ್ಯರು ಅವಿಶ್ವಾಸ ಮಂಡನೆ ಮಾಡಿ ಸಂಸ್ಥೆಯ ಮ್ಯಾನೇಜರ ಅವರಿಗೆ ಶೀಘ್ರವಾಗಿ ಅಧ್ಯಕ್ಷರ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.

17 ಜನ ಸದಸ್ಯ ಬಲ ಹೊಂದಿರುವ ಸಂಘಕ್ಕೆ 11 ಜನ ನಿರ್ಣಾಯಕ ಸದಸ್ಯರೇ ನಿರ್ಣಾಯಕ. ಪ್ರಮುಖವಾಗಿ ಇಲ್ಲಿ ಗಮನಿಸಬೇಕೆಂದರೇ ಕತ್ತಿ ಕುಟುಂಬದಿಂದ ಅಧಿಕಾರ ಅನುಭವಿಸಿದವೇ ಈಗ ಕತ್ತಿ ಕುಟುಂಬ ವಿರುದ್ಧ ಹೋಗಿರುವದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೇವಲ 6 ಸದಸ್ಯರು ಮಾತ್ರ ಕತ್ತಿ ಕುಟುಂಬದ ಬೆಂಬಲಕ್ಕೆ ನಿಂತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಕತ್ತಿ ಕುಟುಂಬದ ವಿರುದ್ಧದ ರಾಜಕೀಯ ಚದುರಂಗದಾಟದಲ್ಲಿ ಮತ್ತೊಮ್ಮೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಗೋಕಾಕ ಟೀಂ ಮೇಲುಗೈ ಸಾಧಿಸಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ತೀರುವು ಪಡೆಯಲಿದೆ ಎಂದು ಕಾಯ್ದು ನೋಡಬೇಕಿದೆ.