ಹುಕ್ಕೇರಿ : ಹುಕ್ಕೇರಿ ತಹಶೀಲ್ದಾರ ಕಚೇರಿಯಲ್ಲಿನ ಲಂಚಾವತಾರದ ದೂರುಗಳು ಹಿನ್ನೆಲೆಯಲ್ಲಿ ಹುಕ್ಕೇರಿ ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮಧ್ಯಾಹ್ನ ಕಚೇರಿ ಮೇಲೆ ದಾಳಿ ನಡೆಸಿ ಕಚೇರಿಯ ಕಡತಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸಿದರು‌. ಲೋಕಾ ಅಧಿಕಾರಿಗಳು ತಹಶೀಲ್ದಾರ ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿ ಕಡತ ಪರಿಶೀಲನೆ ಮಾಡುತ್ತಿದ್ದಾರೆ.

ಲೋಕಾಯುಕ್ತ ಡಿ ಎಸ್ ಪಿ ಗಳಾದ ಭರತ ಎಸ್ ಆರ್ ಮತ್ತು ಪುಷ್ಪಲತಾ ಎಸ್ ಹಾಗೂ ಇನ್ಸಪೆಕ್ಟರ ಗಳಾದ ವೆಂಕಟೇಶ ಯಡಹಳ್ಳಿ ಮತ್ತು ಎಸ್ ಎಚ್ ಹೋಸಮನಿ ನೇತೃತ್ವದ ತಂಡ ಹುಕ್ಕೇರಿ ತಹಸಿಲ್ದಾರ ಕಚೇರಿ ಮೇಲೆ ದಾಳಿ ನಡೆಸಿದೆ. ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶ ಬಿ ಎಸ್ ಪಾಟೀಲ ಆದೇಶದ ಮೇರೆಗೆ ದಾಳಿ ನಡೆದಿದೆ.

.