ಹುಕ್ಕೇರಿ: ವಿಶೇಷ ಚೇತನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿಶೇಷ ಜಾಬ ಕಾರ್ಡ ವಿತರಣಾ ಅಭಿಯಾನಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್ ಮಲ್ಲಾಡದ ಚಾಲನೆ ನೀಡಿದರು.
ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಅವರು ಮನೆ ಮನೆ ತೆರಳಿ ವಿಶೇಷ ಚೇತನರಿಗೆ ಜಾಬ್ ಕಾರ್ಡ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಹುಕ್ಕೇರಿ ತಾಲೂಕಿನ 52 ಗ್ರಾಮ ಗ್ರಾಮ ಪಂಚಾಯತಿಗಳಲ್ಲಿ ಏಪ್ರೀಲ್. 1 ರಿಂದ ಏಪ್ರೀಲ್ 15 ರವರೆಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಲಾಭವನ್ನು ವಿಶೇಷ ಚೇತನರು ಪಡೆದುಕೊಳ್ಳಬೇಕು ಎಂದರು.
ಈ ವರ್ಷ ನರೇಗಾ ಕೂಲಿ ದಿನಕ್ಕೆ ರೂ. 349 ರಿಂದ ರೂ. 370 ಗಳಿಗೆ ಹೆಚ್ಚಿಸಲಾಗಿದೆ. ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗದಲ್ಲಿ 37000 ಪಡೆಯಬದುದಾಗಿದೆ. ವಿಶೇಷ ಚೇತನರು ಆರ್ಥಿಕವಾಗಿ ಸಬಲರಾಗಬೇಕು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವು ನಿಟ್ಟಿನಲ್ಲಿ
ಅವರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50% ರಿಯಾಯಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಓ ಚಂದ್ರಪ್ಪ ಗುಡದರ, ಐಇಸಿ ಸಂಯೋಜಕ ಮಹಾಂತೇಶ ಬಾದವನಮಠ, ಆಡಳಿತ ಸಹಾಯಕರಾದ ಪ್ರೀತಿ ಜವಳಿ, ಅಜೀತ ಮಲ್ಲಾರಿಗೋಳ, ಅಪ್ಪಾಸಾಹೇಬ ತಹಶಿಲ್ದಾರ ಉಪಸ್ಥಿತರಿದ್ದರು.