ಹುಕ್ಕೇರಿ: ಸಾಮಾಜೀಕ ಕಳಕಳಿ‌ ಉಳ್ಳ ಬಸವೇಶ ಪಟ್ಟಣಶೆಟ್ಟಿ ಅವರು ಭವಿಷ್ಯದ ನಾಯಕ ಆಗುವುದರಲ್ಲಿ ಸಂದೇಹವಿಲ್ಲ ಅವರ ಒಳ್ಳೆಯ ಗುಣಗಳೇ ಅವರನ್ನು ಬೆಳೆಸುತ್ತವೆ ಎಂದು ಕನ್ನಡಮ್ಮ ದಿನ ಪತ್ರಿಕೆಯ ಸಂಪಾದಕ ರಾಜೀವ ಟೊಪಣ್ಣವರ ಹೇಳಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಬಸವೇಶ ಪಟ್ಟಣಶೆಟ್ಟಿ ಅವರ 41 ನೇ ಜನ್ಮ ದಿನಾಚರಣೆ ನಿಮಿತ್ತ ಅಭಿಮಾನಿಗಳು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿ, ಬಸವೇಶ ಅವರು ಮೊದಲಿನಿಂದಲೂ ಎಲೆಮರೆ ಕಾಯಿಯಂತೆ ಬಡ ಜನ ಹಾಗೂ ನೊಂದವ ಕಷ್ಟ ಸುಖದಲ್ಲಿ ಭಾಗಿಯಾಗಿವ ಗುಣ ಹೊಂದಿರುವ ಅಪರೂಪದ ವ್ಯಕ್ತಿ, ರಾಜಕೀಯವಾಗಿ ಅವರು ಇನ್ನೂ ಉನ್ನತಕ್ಕೆ ಬೆಳೆಯಲಿ. ದೇವರು ಅವರಿಗೆ ಇನ್ನೂ ಹೆಚ್ಚು ಜನ ಸೇವೆ ಮಾಡುವ ಹೆಚ್ಚಿನ ಶಕ್ತಿ ನೀಡಲಿ ಎಂದರು

ಕಾಂಗ್ರೆಸ್ ಯುವ ಧುರೀಣರಾದ ಕಿರಣ ರಜಪೂತ ಮಾತನಾಡಿ, ತಾಲೂಕಿನ ಭರವಸೆಯ ಯುವನಾಯಕ ಬಸವೇಶ ಅವರು ಸ್ನೇಹಜೀವಿ, ನೇರ ನಡೆ ನೇರ ನುಡಿ ವ್ಯಕ್ತಿತ್ವದ ಅವರು ನೂರಾರು ಯುವಕರಿಗೆ ಸ್ಪೂರ್ತಿ ಆಗಿ ಅದೆಷ್ಟೋ ನಿರುದ್ಯೋಗಿ ಯುವಕರಿಗೆ ದಾರಿ ದೀಪ ಆಗಿದ್ದಾರೆ. ಪುರಸಭೆ ಸದಸ್ಯರಿದ್ದಾಗಲೂ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜಕೀಯವಾಗಿ, ಸಾಮಾಜೀಕವಾಗಿ ಉನ್ನತ ಸ್ಥಾನ ಕ್ಕೆ ಏರಲಿ. ಅವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದರು.

ಈ ಸಂಧರ್ಭದಲ್ಲಿ ಚೇತನ ಹೊಳೆಪ್ಪಗೋಳ, ವಿನೋದ ರಾಮದುರ್ಗ,ಸಚೀನ ಖೋತ, ಬಸವರಾಜ ಶಿರ್ಯಾಪ್ಪಗೋಳ, ಸಂಜು ಗಂಡ್ರೋಳಿ, ದಯಾನಂದ ಪಾಟೀಲ, ಪ್ರಜ್ವಲ ಮಾರಿಯಾಳಿ, ಆಕಾಶ ಸಿಳಿ, ಮಹಾಂತೇಶ ತಳವಾರ, ಆಕಾಶ ಸಾವಗಾಂವಕರ, ಸಚೀನ ಹಿರೇಮಠ, ಕುನಾಲ ಪೋತದಾರ, ವಿನಯ ಉಂಡಾಳೆ, ಶುಭಂ ಸಾವಗಾಂವಕರ, ಸನ್ನಿ ನರುಗೋಳ, ಧನಂಜಯ ಮಾನೆ, ಕೇದಾರ ಒಥಾರಿ, ತುಕಾರಾಂ ಮುಗಳಿ, ನಾಗೇಶ ಕುಲಕರ್ಣಿ, ಸಂತೋಷ ಪಾಟೀಲ, ಇರ್ಪಾನ ಮೋಮಿನದಾದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.