ಹುಕ್ಕೇರಿ: ಸಿಇಟಿ ಪರೀಕ್ಷೆ ವೇಳೆ ಜನಿವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಿವಾರ ಧರಿಸುವ ತಾಲೂಕಿನ ವಿವಿಧ ಸಮುದಾಯದಿಂದ ಹುಕ್ಕೇರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಹಳೇ ತಹಶೀಲ್ದಾರ ಕಚೇರಿಯಲ್ಲಿ ಬುಧವಾರದಂದು ಜಮಾಯಿಸಿದ ಪ್ರತಿಭಟನಕಾರರು ಅಲ್ಲಿಂದ ಕೋರ್ಟ್ ಸರ್ಕಲ್‌ ವರೆಗೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ತೀವೃ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ ಮಂಜುಳಾ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಬೀದರ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ್ದಾರೆ. ಅಲ್ಲದೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮುಖಂಡರಾದ ಗುರು ಕುಲಕರ್ಣಿ, ಜಯಸಿಂಗ ಸನದಿ, ರಾಜು ಚೌಗಲಾ, ಬಾಹುಬಲಿ ನಾಗನೂರಿ, ಸುರೇಶ ಉಪಾಸಿ, ಬಿ.ಬಿ.ರಜಪೂತ, ಗಜಾನನ ಬಡಿಗೇರ, ಪ್ರಕಾಶ ಮುತಾಲಿಕ, ಅರವಿಂದ ದೇಶಪಾಂಡೆ, ಪ್ರಸಾದ ಖಾಡೆ, ಸಂಜೀವ ಮುತಾಲಿಕ, ಕೆ.ಬಿ ಬಡಿಗೇರ, ಸಂತೋಷ ಸಾವಳಗಿ, ಸಂಜು ಬಸ್ತವಾಡ, ಶ್ರೀಕಾಂತ ಬಡಿಗೇರ, ವಿಜಯ ದೇಸಾಯಿ, ಹನುಮಂತ ಇನಾಮದಾರ, ಮಾರುತಿ ಪವಾರ, ವಿವೇಕ ಪುರಾಣಿಕ, ರವೀಂದ್ರ ಬಡಿಗೇರ, ಪದ್ಮನಾಭ ಪೋತದಾರ, ಶ್ರೀಧರ ಖತಗಲಿ, ಸಿದ್ದು ಬೆನಾಡಿಕರ ಮತ್ತಿತರರು ಉಪಸ್ಥಿತರಿದ್ದರು.