ಘಟಪ್ರಭಾ; ದೂಪದಾಳ ಗ್ರಾಮದಲ್ಲಿ ಪಿಕೆಪಿಎಸ್ ಸಹಕಾರಿ ಸಂಘ ತಮಗೆ ಬೇಕಾದ ಕೆಲವರಿಗೆ ಅಷ್ಟೇ ಪತ್‌ ವಿತರಣೆ ಮಾಡಿತ್ತಿರುವುದು ಹಾಗೂ ವೈಯಕ್ತಿಕ ಸಾಲ ಕೇವಲ ಕೆಲ ಪ್ರಭಾವಿತ ವ್ಯಕ್ತಿಗಳಿಗೆ ಮಾತ್ರ ಕೊಟ್ಟು ಬಡ ರೈತರಿಗೆ ವಿತರಿಸದೆ ಅನ್ಯಾಯ ಮಾಡುತ್ತಿರುವ ಪಿಕೆಪಿಎಸ ಸಂಘದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿ ಎಷ್ಟು ಜನರಿಗೆ ಪತ್ ವಿತರಿಸಿರುವ ಕುರಿತು ಮಾಹಿತಿ ನೀಡುವಂತೆ ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕರವೇ ರೈತ ಘಟಕ ಜಿಲ್ಲಾಧ್ಯಕ್ಷರು ರೆಹಮಾನ್ ಮೊಕಾಶಿ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪ ಗಾಡಿವಡ್ಡರ ಕರವೇ ಜಿಲ್ಲಾ ಸಂಚಾಲಕ ಪಪ್ಪು ಹಂದಿಗುಂದ ರೈತ ಘಟಕ ತಾಲ್ಲೂಕು ಅದ್ಯಕ್ಷ ರವಿ ನಾವಿ ಉಪಾಧ್ಯಕ್ಷ ರಾಜು ವಗ್ಗನ್ನವರ ಗಜಪ್ಪ ಗಾಡಿವಡ್ಡರ ಮಹೇಶ್ ಗಡಕರಿ ಪ್ರಕಾಶ ಮೇತ್ರಿ ಕುಮಾರ್ ಗಡಕರಿ ಕುಮಾ‌ರ್ ಕುರಬೇಟ ತಮ್ಮಣ್ಣಾ ಗಾಡಿವಡ್ಡರ ಸುದೀ‌ರ್ ಕದಮ ಸುಭಾಷ್ ಮೇತ್ರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು