ಹುಕ್ಕೇರಿ: ದೇಶದಲ್ಲೆ ಮಾದರಿಯಾಗಿರುವ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘವನ್ನ ಇನ್ನಷ್ಟು ಉತ್ತಂಗಕ್ಕೆ ಒಯುವ ಕೆಲಸವಾಗಬೇಕು ಎಂದು ಸಹಕಾರ ರತ್ನ ಡಿ ಟಿ ಪಾಟೀಲ ಆಶಯ ವ್ಯಕ್ತಪಡಿಸಿದರು.

ಜೊಲ್ಲೆ ಮತ್ತು ಜಾರಕಿಹೊಳಿ ಫ್ಯಾನೆಲ್ ನಿಂದ ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕರಗಾಂವ ಗ್ರಾಮದಲ್ಲಿರುವ ಹಿರಿಯ ಧುರೀಣ ಡಿ ಟಿ ಪಾಟೀಲ ಅವರ ನಿವಾಸಕ್ಕೆ ನೂತನ ಅಧ್ಯಕ್ಷ ಜಯಗೌಡ ಪಾಟೀಲ್ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಆಗಮಿಸಿ ಉಭಯ ಕುಶಲೋಪರಿ ಹಂಚಿಕೊಂಡು ಮಾರ್ಗದರ್ಶನ ನೀಡುವಂತೆ ಮನವಿ ಮಾಡಿಕೊಂಡರು.


ನೂತನ ಅಧ್ಯಕ್ಷರಿಗೆ ಸಲಹೆ ನೀಡಿದ ಡಿ ಟಿ ಪಾಟೀಲರು ಈಗಾಗಲೇ ಹುಕ್ಕೇರಿ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಆಗುತ್ತಿವೆ. ಸಹಕಾರಿ ಸಂಘಗಳು ಅವನತಿಗೆ ಹೋಗುತ್ತಿರುವ ಹಂತದಲ್ಲಿದ್ದು ಅವುಗಳ ರಕ್ಷಣೆ ಮಾಡುವಂತೆ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಿ ಟಿ ಪಾಟೀಲ ಅವರಿಗೆ ನಿರ್ದೇಶಕರು ಹೂವಿನ ಮಾಲೆ ಹಾಕಿ ಸತ್ಕರಿಸಿದರು. ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರನ್ನ ಡಿ ಟಿ ಪಾಟೀಲ ಕುಟುಂಬದಿಂದ ಸನ್ಮಾನಿಸಲಾಯಿತು.
