ಚಿಕ್ಕೋಡಿ: ಜೈನ ಸಮುದಾಯಕ್ಕೆ ನಿಗಮ ಮಂಡಳಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿ‌ನ ಐನಾಪೂರ ಪಟ್ಟಣದಲ್ಲಿ ಬೃಹತ್ ಸಮಾವೇಶ ಜರುಗಿತು.

ಸಮಾವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿದ್ದರು. ಸಮಾವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ ನಿಗಮ ಮಂಡಳಿ‌ ಮಾಡಬೇಕೆಂದು ಈಗಾಗಲೇ ಗುಣಧರನಂದಿ ಮಹರಾಜರು ಪತ್ರವನ್ನ ನೀಡಿದ್ದಾರೆ.

ಮಹಾವೀರರು ಬದುಕು ಬದಕಲು ಬಿಡು ಎಂಬ ಸಂದೇಶ ನೀಡಿದ್ದಾರೆ.ಆ ಸಂದೇಶದ ಪ್ರಕಾರ ನಾವೆಲ್ಲ ಬದುಕಬೇಕು. ಜೈನ ಧರ್ಮ ಒಂದು ಸನಾತನ ಧರ್ಮವಾಗಿದೆ ಎಂದರು.

ಇನ್ನೂ ಸಮಾವೇಶದಲ್ಲಿ ಜೈನ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆಗೆ ಜೈನ ಮುನಿಗಳ ಒತ್ತಾಯ ಮಾಡಿದರು‌.12 ತಿಂಗಳೊಳಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕು ಇಲ್ಲವಾದಲ್ಲಿ ಸಲ್ಲೇಖನ ವೃತ ಆರಂಭಿಸುವ ಎಚ್ಚರಿಕೆಯನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈನ ಮುನಿ ಗುಣಧರ ನಂದಿ ಮಹರಾಜ ನೀಡಿದ್ದಾರೆ.