ಚಿಕ್ಕೋಡಿ: ಸಿಡಿಲು ಬಡೆದು ಎಮ್ಮೆಯೊಂದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿಷ್ಣುವಾಡಿ ಗ್ರಾಮದಲ್ಲಿ ನಡೆದಿದೆ.
ಅಮರ ತಾತೋಬಾ ಸಾಳುಂಕೆ ಎಂಬುವರಿಗೆ ಸೇರಿದ ಎಮ್ಮೆ ಸಾವನ್ನಪ್ಪಿದೆ. ಸಂಜೆ 7 ಘಂಟೆ ಸುಮಾರಿಗೆ ಘಟನೆ ಸಂಭವಿಸಿದೆ.
ಮರದ ಕೆಳಗೆ ಕಟ್ಟಿರುವ ಎಮ್ಮೆಗೆ ಸಿಡಿಲು ಹೊಡೆದು ಸ್ಥಳದಲ್ಲೇ ಎಮ್ಮೆ ಸಾವನ್ನಪ್ಪಿದೆ. ಅಂದಾಜು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು,
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.