ಹುಕ್ಕೇರಿ : ಪಟ್ಟಣದ ತುಬಚಿ ಶಿಕ್ಷಣ ಸಂಸ್ಥೆಯ ಜಗಳಗಳು ನಿಲ್ಲುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ದಿನಕ್ಕೊಂದರಂತೆ ಒಬ್ಬರ ಮೇಲೆ ಒಬ್ಬರು ಪ್ರಕರಣ ದಾಖಲಿಸುವದು ಮುಂದುವರೆದಿದ್ದು ಮತ್ತೊಮ್ಮೆ ಪ್ರಭಾಕರ ಉರ್ಫ ಅಪುಶಿ ತುಬಚಿ ಹಾಗೂ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.
ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವರುದ್ರಪ್ಪ ಉರ್ಪ ಅನಿಲ ಶೆಟ್ಟಿ ಅವರ ಪತ್ನಿ ಸೀಮಾ ಶೆಟ್ಟಿ ಅವರು ಅಪುಶ ತುಬಚಿ ಹಾಗೂ ಆತನ ಸಹಚರರ ಮೇಲೆ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಮ್ಮ ಕುಟುಂಬದ ಮೇಲಿನ ಸಿಟ್ಟಿನಿಂದಾಗಿ ಅಪುಶಿ ತುಬಚಿ, ಸಂತೋಷ ಸುಣಗಾರ, ಅಜೀತ ರಾಣಿಕನವರ, ಶ್ರೀಕಾಂತ ಸುಣಗಾರ ಇವರೆಲ್ಲ ನಮ್ಮ ಮನೆ ಹತ್ತಿರ ಬಂದು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವದಾಗಿ ಜೀವ ಧಮಕಿ ಹಾಕಿರುತ್ತಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ದೂರಿನಡಿ ನ್ಯಾಯಾಲಯದ ಅನುಮತಿ ಕೋರಿ ಸೆಕ್ಷೆನ್ನ 351, 352 ಬಿ ಎನ್ ಎಸ್ ಕಲಂ ಅಡಿ ಪ್ರಕರಣವನ್ನ ಹುಕ್ಕೇರಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.