ಹುಕ್ಕೇರಿ: ಜೈನ ಸಮಾಜದ ವಿವಿಧ ಬೇಡಿಕೆಗಾಗಿ ಬೃಹತ್ ಸಮಾವೇಶ ಹಾಗೂ ಬಟ್ಟಾಕರರ ಸಮ್ಮೇಳನವನ್ನ ಜೂ.08 ರಂದು ಐನಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ಸಮಾವೇಶಕ್ಕೆ ಆಗಮಿಸುವರಿಗೆ ಹುಕ್ಕೇರಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಿಂದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಹಾಗೂ ಜೈನ ಸಮಾಜದ ಮುಖಂಡರಾದ ಮಹಾವೀರ ನಿಲಜಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಚಾರ್ಯ ಶ್ರೀ 108 ಗುಣಧರನಂದಿ ಮುನಿ ಮಹಾರಾಜರ ದಿವ್ಯ ಸಾನಿಧ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇವರ ಉಪಸ್ಥಿತಿಯಲ್ಲಿ ಜೂನ 08 ರಂದು ಐನಾಪುರದಲ್ಲಿ ಜೈನ ಸಮುದಾಯದ ಕುರಿತು ವಿವಿಧ ಬೇಡಿಕೆಗಳ ಹಕ್ಕೊತ್ತಾಯದ ಬ್ರಹತ್ ಜೈನ ಸಮಾವೇಶ ಹಾಗೂ ಭಟ್ಟಾರಕರ ಸಮ್ಮೇಳನವಿದ್ದು, ಆ ದಿನ ಬೆಳಿಗ್ಗೆ ನಮ್ಮ ಸಂಸ್ಥೆಯಿಂದ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಅವರು ವಿನಂತಿಸಿದ್ದಾರೆ.

ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ್ ನಿಲಜಗಿ ಮಾತನಾಡಿ, ಹುಕ್ಕೇರಿ ಪಟ್ಟಣ, ಕೋಚರಿ, ಮಸರಗುಪ್ಪಿ, ಹೆಬ್ಬಾಳಗಳಿಂದ ಆಗಮಿಸುವರಿಗೆ ಹುಕ್ಕೇರಿ ಮಹಾವೀರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಿಂದ ಹಾಗೂ ಯರನಾಳ, ಬಸ್ತವಾಡ, ಹೊಸುರ ಗ್ರಾಮದಲ್ಲಿ ಬಸದಿ ಹತ್ತಿರ ಬಸ್ ವ್ಯವಸ್ಥೆ ಮತ್ತು ಎಲಿಮುನ್ನೋಳಿ ಗ್ರಾಮದ ತುರಮುಂದಿಯಿಂದ ಬಸ್ ಗಳ ವ್ಯವಸ್ತೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ 9741979050, 7829463329, 9743431814 ನಂಬರಗಳಿಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ರೋಹಿತ ಚೌಗಲಾ,ಬಾಹುಬಲಿ ಸೊಲ್ಲಾಪೂರೆ, ಸಂಜಯ ನಿಲಜಗಿ ಉಪಸ್ಥಿತರಿದ್ದರು.