ಅಥಣಿ :ಗಡಿಯಲ್ಲಿ ಪಾಕಿಸ್ತಾನದ ಸೊಕ್ಕಡಗಿಸಿದ ಭಾರತೀಯ ವೀರ ಯೋಧರಿಗೆ ದೇಶಾದ್ಯಾಂತ ಕೃತಜ್ಞತೆ ಗಳ ಮಹಾಪುರ ಹರಿದು ಬರುತ್ತಿದೆ. ಅಂತಹ ವೀರ ಯೋಧ ಒಬ್ಬರು ಸೇವಾ ನಿವೃತ್ತಿ ಬಳಿಕ ಹುಟ್ಟೂರಿಗೆ ಬಂದಾಗ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿ ಸ್ವಾಗತ ಕೋರಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಳವಾಡ ಗ್ರಾಮದ ವೀರ ಯೋಧ ಶಂಕರ್ ಪರಗೌಡ ಜಾಲಗೇರಿ, 24 ವರ್ಷಗಳ ಸುದೀರ್ಘ ದೇಶ ಸೇವೆ ಬಳಿಕ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.
ರೈಲ್ವೆ ನಿಲ್ದಾಣದಿಂದ ಅಥಣಿ ಪಟ್ಟಣದತ್ತ ಬರುತ್ತಿದ್ದಂತೆ ಪಟ್ಟಣದ ಶಿವಾಜಿ ಪುತ್ತಳಿಗೆ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಬಸವೇಶ್ವರ ಪುತ್ತಳಿಗೆ ಪೂಜೆಯನ್ನು ಸಲ್ಲಿಸಿ ಪ್ರಮುಖ ರಸ್ತೆಗಳಲ್ಲಿ ಡಾಲ್ಬಿ ಸೌಂಡ್ ಹಾಕಿ ಪಟಾಕಿ ಸಿಡಿಸಿ ಸ್ವ ಗ್ರಾಮದ ವರೆಗೂ ಮೆರವಣಿಗೆ ಮಾಡಲಾಯಿತು.

ಗ್ರಾಮದಲ್ಲಿ ಯೋಧ ಶಂಕರ ಅವರಿಗೆ ಮುತೈದೆಯರು ಆರತಿ ಮಾಡಿ ಬರಮಾಡಿಕೊಂಡರು. ತವರಿಗೆ ಬಂದ ಮಗನನ್ನ ಕುಟುಂಬಸ್ಥರು ಪ್ರೀತಿಯಿಂದ ಬರಮಾಡಿಕೊಂಡರು. ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಬೃಹತ್ ವೇದಿಕೆಯ ಮೇಲೆ ಯೋಧನಿಗೆ ಗಣ್ಯರು ಹುಮಳೆ ಸುರಿಸುವ ಮೂಲಕ ಗೌರವಿಸಿ ಸತ್ಕರಿಸಿದರು.

ಗಡಿಯಲ್ಲಿ ತಮ್ಮ ಜೀವ ಫಣಕ್ಕಿಟ್ಟು ಹೋರಾಡಿ ಸುರಕ್ಷಿತವಾಗಿ ಹುಟ್ಟುರಿಗೆ ಬಂದ ಯೋಧ ಶಂಕರ ಅವರಿಗೆ ಸಿಕ್ಕ ಹೃದಯಸ್ಪರ್ಶಿ ಸ್ವಾಗತ ಎಲ್ಲರ ಗಮನ ಸೆಳೆಯಿತು.

.