ಹುಕ್ಕೇರಿ: ಪಟ್ಟಣದ ಪ್ರತಿಷ್ಠಿತ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಅವರ ಸುಪುತ್ರನ ಮದುವೆ ಸಮಾರಂಭವು ಅತೀ ವಿಜೃಂಭಣೆಯಿಂದ ಜರುಗುವುದರ ಮೂಲಕ ಹುಕ್ಕೇರಿಯಲ್ಲೇ ಅತೀ ದೊಡ್ಡ ಅದ್ದೂರಿ ಮದುವೆ ಎಂಬ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಮಹಾವೀರ ನಿಲಜಗಿ ಅವರ ಸುಪುತ್ರ ಪ್ರಜ್ವಲ ಜೊತೆ ಅಲಾರವಾಡದ ತಾತ್ಯಾಸಾಹೇಬ ಜನಗೌಡಾ ಸುಪುತ್ರಿ ಪ್ರೀಯಾ ವಿವಾಹ ಮಹೋತ್ಸವ ಸಮಾರಂಭ ಶುಕ್ರವಾರ ಜೈನ ಸಂಪ್ರದಾಯದ‌ ಪ್ರಕಾರ ಅದ್ದೂರಿಯಾಗಿ ನೆರವೇರಿತು.

ಕಳೇದ ಒಂದು ತಿಂಗಳಿನಿಂದ ಅದ್ದೂರಿ ಮದುವೆ ಸಮಾರಂಭಕ್ಕೆ ಭರದ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು. ನಿಲಜಗಿ ಕುಟುಂಬದ ಮನೆ ಮಗಳ ಹಾಗೂ ಮದುವೆ ನಡೆಯುವ ಶಾಲಾ ಆವರಣದಲ್ಲಿ ವಿವಿಧ ಬಗೆಯ ಪುಷ್ಪಗಳಿಂದ ಶೃಂಗಾರ, ತರಿಳು-ತೋರಣ, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುವಂತಿತ್ತು.

12:31 ವಿಶೇಷ ಮೂಹುರ್ತದಲ್ಲಿ ನವ ಜೋಡಿ ಪ್ರಜ್ವಲ್-ಪ್ರೀಯಾ ಮಠಾಧೀಶರು, ಗುರು-ಹಿರಿಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟರು. ಸಾರಾಪುರದ ಪಂಡಿತ ಸಿದ್ದಪ್ಪ ಉಪಾಧ್ಯೆ, ಹುಕ್ಕೇರಿಯ ರಾಜು ಉಪಾಧ್ಯೆ ಶಾಸ್ತ್ರೋಕ್ತವಾಗಿ ಜೈನ ಸಂಪ್ರದಾಯದಂತೆ ಮದುವೆಯ ವಿಧಿವಿಧಾನ ನೆರವೇರಿಸಿದರು. ಸಂಜೆ 5 ಗಂಟೆಯಿಂದ ಮದುವೆಯ ರಿಸಪ್ಸೇನ್ ಸಮಾರಂಭದಲ್ಲಿ ವಿವಿಧ ಜಿಲ್ಲೆ ಸೇರಿದಂತೆ ಸಾವಿರಾರು ಜನರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು. ಇನ್ನೂ ಅದ್ದೂರಿ ಮದುವೆ ಸಮಾರಂಭ ಹಿನ್ನಲೆ ಬರುವ ವಾಹನಗಳಿಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ನಿಖಿಲ್ ಕತ್ತಿ, ಲಖನ್ ಜಾರಕಿಹೊಳಿ, ಮಾಜಿ ಸಂಸದ ರಮೇಶ ಕತ್ತಿ, ಸಚಿವ ಅಣ್ಣಾಸಾಹೇಬ ಜೊಲ್ಲೆ, ವಿಪ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಶಶಿಕಾಂತ ನಾಯಿಕ, ಉದ್ಯಮಿ ಗೋಪಾಲ ಜನಗೌಡಾ, ನ್ಯಾಯವಾದಿ ಪಿ.ಆರ್. ಚೌಗಲಾ, ಮಹಾವೀರ ನಿಲಜಗಿ, ತಾತ್ಯಾಸಾಹೇಬ ಜನಗೌಡ, ಪದ್ಮಶ್ರೀ ನಿಲಜಗಿ, ಭಾರತಿ ಜನಗೌಡ, ಮುಖಂಡ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಅಜ್ಜಪ್ಪ ಕಲ್ಲಟ್ಟಿ, ಬಸವರಾಜ ಮಟಗಾರ, ಸಂಜಯ ಖತಗಲ್ಲಿ, ಮಹಾವೀರ ಚವ್ವಾಣ, ಅಶೋಕ ಪಾಟೀಲ, ಸಂಜಯ ನಿಲಜಗಿ, ರಾಜೀವ ಚವ್ವಾಣ, ಅಕ್ಷಯ ಕಜುಬಡಗೆ, ಅಕ್ಷಯ ಕಜುಬಡಗೆ, ಅಕ್ಷಯ ಕಜುಬಡಗೆ, ಸೊಲ್ಲಾಪುರ, ಸಿ.ಪಿ.ಪಾಟೀಲ, ಸಂಜು ಬಸ್ತವಾಡ, ಕಿರಣ ಸೊಲ್ಲಾಪುರ, ಅನಿಲ ಶೆಟ್ಟಿ, ಮಹಾವೀರ ಬಾಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.