ಅಥಣಿ : ಕೃಷಿ ಹೊಂಡದಲ್ಲಿ ಬಿದ್ದು ಐದು ವರ್ಷದ ಮಗು ಸಾವಣಪ್ಪಿರುವ ದುರ್ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ.

ಮನೋಜ್ ಗಿಡ್ಡಪ್ಪ ವಡ್ಡರ (5) ಮೃತ ಬಾಲಕ. ಆಟವಾಡುವ ವೇಳೆ ಮನೆ ಪಕ್ಕದ ಜಮೀನಿನಲ್ಲಿ ಇದ್ದ ಕೃಷಿ ಹೊಂಡಕ್ಕೆ ಆಯತಪ್ಪಿ ಬಿದ್ದು ಮಗು ಮೃತಪಟ್ಟಿದೆ.

ಪುಟ್ಟ ಮಗುವನ್ನ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

