ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಲ್ಲಿ ಹಲವು ವರ್ಷಗಳಿಂದ ಹಿಟ್ಲರ್ ಆಡಳಿತವಿದ್ದು, ಅದಕ್ಕೆ ಬೇಸತ್ತು ನಾವು 11 ಜನ ನಿರ್ದೇಶಕರ ಮಂಡಳಿಯವರು ಹೊರಗೆ ಬಂದಿದೆವೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು.
ಪತ್ರಿಕಾ ಪ್ರಕಟಣೆ ಮುಲಕ ತಿಳಿಸಿರುವ ಅವರು, ವಿದ್ಯುತ್ ಸಹಕಾರಿ ಸಂಘದಿಂದ ರೈತರಿಗಾಗಿ ಹಾಗೂ ತೋಟಪಟ್ಟಿ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ 24 ಘಂಟೆ ವಿದ್ಯುತ್ ಕೊಡಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸಿದರು ಅವರು ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಆದ ಕಾರಣ ನಾವುಗಳು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ,ಮಾಜಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಹಾಯ ಸಹಕಾರ ತೆಗೆದುಕೊಂಡು ಸಂಸ್ಥೆಯಲ್ಲಿ ಬದಲಾವಣೆ ತಂದು
ಕಡಿಮೆ ಅವಧಿಯಲ್ಲಿ ನಿರಂತರ ಜ್ಯೋತಿ 24 ಘಂಟೆ ವಿದ್ಯುತ ಕೊಡುವ ವ್ಯವಸ್ಥೆ ಮಾಡಲಿದೇವೆ ಎಂದರು.
ಸುಟ್ಟ ಟಿ.ಸಿ.ಗಳು ರಿಪೇರಿ ಮಾಡಲು ಹಿಂದೆ ಮುಂದೆ ಆಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ನಾವು ಹೊಸ ಟಿ.ಸಿ ಗಳನ್ನು ಖರೀದಿ ಮಾಡಿ ಒಂದೆರಡು ದಿನಗಳಲ್ಲಿ ಟಿ.ಸಿಗಳನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ವಿದ್ಯುತ ಕಂಬ ಮುರಿದರೆ ರೈತರಿಂದ ಬಹಳಷ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಇದನ್ನು ಮುಂದೆ ವಿದ್ಯುತ್ ಕಂಬಗಳನ್ನು ಕೊಡಲು ನಾವೇಲ್ಲ ನಿರ್ದರಿಸಿದ್ದೇವೆ.
ರೈತರು ಇನ್ನೂ ಮುಂದೆ ಯಾರ ಮನೆಗೂ ಹೋಗದೇ ತಮ್ಮ ತಮ್ಮ ಕ್ಷೇತ್ರ ನಿರ್ದೇಶಕರಿಗೆ ಪೋನ್ ಮಾಡಿ ಕೆಲಸಗಳನ್ನು ಹೇಳಿದ್ದಲ್ಲಿ ಅತೀ ಶೀಘ್ರವಾಗಿ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು.
ಈಗಾಗಲೇ 23 ಮೇ 2025 ರಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯನ್ನು ಸರ್ಕಾರದವರು ನಿಗಧಿಪಡಿಸಿದ್ದಾರೆ. ಅವಿಶ್ವಾಸ ಮಂಡನೆಗೆ 11 ಜನ ನಿರ್ದೇಶಕರು ಈಗಾಗಲೇ ಅರ್ಜಿಯನ್ನು ಸಂಘದ ಅಧಿಕಾರಿಗೆ ತಲುಪಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಜನ ಅಪಪ್ರಚಾರ ಮಾಡುತ್ತಿದ್ದು ಆ ಜನರನ್ನು ನಂಬಬಾರದು. ಇನ್ನೂ ಮುಂದೆ ರೈತರ ಏಳಿಗೆಗಾಗಿ ನಾವು ಕೆಲಸ ಮಾಡುತ್ತೇವೆ ನಿಮ್ಮ ಸಹಕಾರಿ ಇರಲಿ ಎಂದರು.