ಚಿಕ್ಕೋಡಿ: ಸಾಲ ಬಾಧೆ ತಾಳಲಾರದೇ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ಚಿಕ್ಕೋಡಿ ಪಟ್ಟಣದ ಇಂದಿರಾನಗರ ನಿವಾಸಿ ರಾಮು ಜಾದವ್(34) ನೇಣಿಗೆ ಶರಣಾಗಿರುವ ಯುವಕ.

ವಿವಿಧೆಡೆ 9 ಲಕ್ಷಕ್ಕೂ ಅಧಿಕ ಸಾಲವನ್ನ ಯುವಕ ಮಾಡಿಕೊಂಡಿದ್ದ ಯುವಕ ಸಾಲ ಬಾಧೆ ತಾಳಲಾರದೇ ಇಂದು ನೇಣಿಗೆ ಕೊರೊಳೊಡ್ಡಿದ್ದಾನೆ.
ಸಾಲ ತೀರಿಸಲು ಐಪಿಎಲ್‌ ಬೆಟ್ಟಿಂಗ್‌ ಆಡಿ ಅದರಲ್ಲೂ ಬಾರಿ ನಷ್ಟವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯುವಕ ಶರಣಾಗಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಯುವಕ ಸಾವಿನ ಸುದ್ದಿ ತಿಳಿದ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.