ಚಿಕ್ಕೋಡಿ: ಕಾಂಗ್ರೆಸ್ ನವರು ದಲಿತರ ಪರ ನಾವು ಅಂತಾ ಹೇಳ್ತಿರಿ. ಈಗ ಜಾತಿ ಸಮೀಕ್ಷೆ ಮಾಡಿದೀರಿ ಅದರಲ್ಲಿ ಮುಸ್ಲಿಮರನ್ನ ನಂಬರ್ ಒನ್ ಅಂತಾ ತೋರಿಸಿದಿರಿ. ದಲಿತರು ಯಾವ ಸ್ಥಾನದಲ್ಲಿ ಇದಾರೆ ಅಂತಾ ಹೇಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಪ್ರಶ್ನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ 100 ರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಐದು ಪ್ರಶ್ನೆ ಕೇಳುತ್ತೇನೆ ದಲಿತರ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಉತ್ತರ ಕೊಡಿ. ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಆರನೂರ ಅಡಿ ಪ್ರತಿಮೆ ಮಾಡ್ತೇವಿ ಅಂದ್ರೀ. ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ ಆರಡಿ ಜಾಗ ಯಾಕೆ ಕೊಡಲಿಲ್ಲ. ವೀರಸಾವರ್ಕರ್ ಅಂಬೇಡ್ಕರ್ ಸೋಲಿಗೆ ಕಾರಣ ಅಂತಾ ಹೇಳಿದೀರಿ.ಸಿದ್ದರಾಮಯ್ಯ ನವರೇ ನಿಮ್ಮ ಕುಟುಂಬದವರು ಯಾರು ಹೋಗಿ ಅಲ್ಲಿ ಸಮೀಕ್ಷೆ ಮಾಡಿದೀರಿ ಹೇಳಿ‌ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ನಮ್ಮ ಮನೆ ದೇವರು ಅಂತಾ ಹೇಳಿದ್ರೀ.ಅಂಬೇಡ್ಕರ್ ಅವರಿಗೆ ಯಾಕೆ ಭಾರತ ರತ್ನ ಕೊಡಲಿಲ್ಲ‌.
ಐದು ಪ್ರಶ್ನೆಗಳಿಗೆ ಉತ್ತರ ಕೊಡಿ.
ಸಿದ್ದರಾಮಯ್ಯನವರು ದಲಿತರನ್ನ ಬಿಟ್ಟಿದ್ದಾರೆ. ತಪ್ಪು ಹೆಜ್ಜೆ ಇಟ್ರೇ ಅಂಬೇಡ್ಕರ್ ಸೋಲಿಸಿದ ರೀತಿ ದಲಿತರನ್ನ ಸಿದ್ದರಾಮಯ್ಯ ಅವರು ಮುಗಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.