ಚಿಕ್ಕೋಡಿ: ನಿಮಗೆ ತಾಕತ್ ಇದ್ರೇ ಅಂಬೇಡ್ಕರ್ ಸೋಲಿಸಿದ್ದು ಸಾವರ್ಕರ್ ಅಂತಾ ನೀವು ಫ್ರೂ ಮಾಡಿದ್ರೇ ನಾಳೆ ನಾನು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನಿ ಇಲ್ಲವಾದ್ರೇ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸವಾಲ್ ಹಾಕಿದರು‌‌.

ನಿಪ್ಪಾಣಿಯಲ್ಲಿ ಭೀಮ ಹೆಜ್ಜೆ 100 ಸಂಭ್ರಮ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರೋ ಹೇಳಿದ ಸುಳ್ಳನ್ನ ಇವರು ಹೇಳುವನ್ನ ಮಾಡ್ತಿದ್ದಾರೆ.ಪ್ರಿಯಾಂಕಾ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರು ನಕಲಿ ದಲಿತರು‌.ಇವರು ಹೇಳಿದ್ರೂ ಜನ ನಂಬುವುದಿಲ್ಲ, ಆದ್ರೇ ಮುಖ್ಯಮಂತ್ರಿ ಮಾತನ್ನ ಜನ ನಂಬ್ತಾರೆ. ಆ ಕಾರಣಕ್ಕೆ ಈ ಸವಾಲ್ ನ್ನ ಸಿದ್ದರಾಮಯ್ಯ ಅವರಿಗೆ ನಾನು ಹಾಕಿದೀನಿ. ಎಂದು ಸಿದ್ದರಾಮಯ್ಯಗೆ ನೇರವಾಗಿ ಛಲವಾದಿ ನಾರಾಯಣಸ್ವಾಮಿ ಸವಾಲ್ ಹಾಡಿದ್ದಾರೆ.


ದಲಿತ ನಾಯಕರನ್ನ ಒಬ್ಬರನ್ನೂ ಬೆಳೆಯಲು ಖರ್ಗೆ ಅವರು ಬಿಟ್ಟಿಲ್ಲ.
ನನ್ನಾ ದಲಿತ ಅಂತಾ ಕರೆಯಬೇಡಿ ಅಂತಾ ಖರ್ಗೆ ಅವರು ಹೇಳ್ತಾರೆ.
ದಲಿತ ಅಂತಾ ನನಗೆ ಸಿಎಂ ಮಾಡ್ತೇನಿ ಅಂದ್ರೇ ಬೇಡಾ ಅಂತಾ ಖರ್ಗೆ ಅವರು ಹೇಳಿದ್ರೂ. ನಿಮಗೆ ನಾಚಿಕೆಯಾಗಬೇಕು, ದಲಿತ ಹೆಸರಿನಲ್ಲಿ ಅನ್ಯಾಯ ಮಾಡ್ತಿದೀರಿ ಎಂದು ಖರ್ಗೆ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಮುಚ್ಚಿಟ್ಟ ಇತಿಹಾಸ ನಾವು ಅನಾವರಣ ಮಾಡಬೇಕಿದೆ. ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಿದ್ದರು.ಮಹಾತ್ಮ ಗಾಂಧಿಯವರು ಅಂದಿನ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಅಧಿವೇಶನದಲ್ಲಿ ನನಗೂ ಮಾತಾಡಲು ಅವಕಾಶ ಕೊಡಿ ಅಂತಾ ಚೀಟಿ ಕಳುಹಿಸಿ ಮೂರು ದಿನ ಕಾದರಂತೆ.
ಅಂಬೇಡ್ಕರ್ ಮೂರು ದಿನ ಕಾದ್ರೂ ಗಾಂಧೀಜಿಯವರ ಕ್ಯಾರೇ ಅನ್ನಲಿಲ್ಲ ಅಂತೆ. ಗಾಂಧೀಜಿಯವರು ಗೌರವ ಕೊಡದಿದ್ದಕ್ಕೆ ಅಂದಿನ ಅಧಿವೇಶನ ಬಿಟ್ಟು ಬಂದಿದ್ದರು.ಇದಾದ ಬಳಿಕ ನಿಪ್ಪಾಣಿಗೆ ಬಂದು ಸಮಾವೇಶ ಮಾಡಿ ವಾಪಾಸ್ ಆಗಿದ್ದರು. ದಲಿತರಿಗೂ ಸೇರಿ ಹೆಚ್ಚು ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ.


ಬೆಳಗಾವಿಯಲ್ಲಿ ಡಿಸೆಂಬರ್ ನಲ್ಲಿ ಗಾಂಧೀಜಿಯವರ ಸಮಾವೇಶ ಮಾಡಿದ್ರೀ. ಅಂದು ಯಾಕೆ ಅಂಬೇಡ್ಕರ್ ಬಂದಿದ್ದು ಮುಚ್ಚಿಟ್ರೀ.
ಜೈ ಭೀಮ ಅನ್ನೋದು ನಿಮಗೆ ವೋಟ್ ಬ್ಯಾಂಕ್ ಗೆ ಮಾಡಿಕೊಂಡಿದ್ದು.ಅಂಬೇಡ್ಕರ್ ಸತ್ತಾಗ ಅನಾಥ ಶವ ಹೂಳುವ ಸ್ಥಳಕ್ಕೆ ಕಳ್ಸಿದ್ರೀ. ಇಂದು ಆ ಜಾಗ ಪುಣ್ಯ ಭೂಮಿಯಾಗಿದೆ.
ಅಂಬೇಡ್ಕರ್ ಸೋಲಿಸಿದ್ದು ಅಷ್ಟೇ ಅಲ್ಲಾ ಇಡೀ ದಲಿತರನ್ನ ಧಮನ ಮಾಡ್ತಿದ್ದಾರೆ. ಸಿದ್ದರಾಮಯ್ಯ ನವರ ಗುರು ಪ್ರಿಯಾಂಕಾ ಖರ್ಗೆ ಇದಾರೆ.
ಸಾವರ್ಕರ್ ಅವರು ಅಂಬೇಡ್ಕರ್ ಅವರನ್ನ ಸೋಲಿಸಿದ್ರೂ ಅಂತಾ ಹೇಳಿದ್ದಾರೆ. ಅಂಬೇಡ್ಕರ್ ಪತ್ರ ಬರೆದಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.