ಹುಕ್ಕೇರಿ: ಶ್ರೀ ರಾಮನವಮಿಯನ್ನ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀ ವಿಠ್ಠಲ ಭಜನಾ ಮಂಡಲದಿಂದ ಆಯೋಜನೆ ಮಾಡಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಭಾಗಿಯಾಗಿ ಶ್ರೀ ಬಾಲರಾಮನಿಗೆ ನಾಮಕರಣ ಮಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು ತೊಟ್ಟಿಲು ತೂಗಿ ಬಾಲರಾಮನ ನಾಮಕರಣ ಮಾಡಿ ಅರ್ಥಪೂರ್ಣವಾಗಿ ರಾಮನವಮಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಕುಂತಲಾ ರಾಮದುರ್ಗ ಮಾತನಾಡಿ ಶ್ರೀ ರಾಮ ಎನ್ನುವದು ನಮ್ಮ ದೇಶದ ಅಸ್ತಿತ್ವ. ಪ್ರತಿಯೊಬ್ಬರು ‌ಶ್ರೀ ರಾಮನ ತತ್ವಗಳನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ರಾಮ‌ರಾಜ್ಯ ಸ್ಥಾಪಿಸಲು ಸಾಧ್ಯವಾಗಲಿದೆ ಎಂದರು.

ರಾಮನವಮಿ ಸಡಗರದಲ್ಲಿ ವಿಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮಾ ಕತ್ತಿ, ಸುನೀತಾ ದೇಶಪಾಂಡೆ ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.