ಹುಕ್ಕೇರಿ: ಜಾತ್ರೆ ಸಂದರ್ಭದಲ್ಲಿ ಗಲಾಟೆ ಸಂಭವಿಸಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅತ್ತಿಹಾಳ ಗ್ರಾಮದಲ್ಲಿ ನಡೆದಿದೆ. ಅತ್ತಿಹಾಳ ಗ್ರಾಮದಲ್ಲಿ
ದೇವರನ್ನ ಆಡಿಸುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ.

ಲಗಮ್ಮವ್ವಾ ದೇವಿ ಜಾತ್ರೆಯಲ್ಲಿ ನಡೆದ ಗಲಾಟೆ ನಡೆದಿದೆ. ಕಳೆದ ಎರಡು ದಿನಗಳಲ್ಲಿ ಸಣ್ಣ ಪುಟ್ಟ ಗಲಾಟೆ ನಡೆದಿತ್ತು‌. ನಿನ್ನೆ ಏಕಾಏಕಿ ಅತ್ತಿಹಾಳ ಗ್ರಾಮದ ದಲಿತ ವ್ಯಕ್ತಿ ಅಶೋಕ ಮಾದರ ಮನೆಗೆ ಯುವಕರ ಗುಂಪಿನಿಂದ ದಾಳಿ ನಡೆಸಲಾಗಿದೆ. ಮನೆ ಮೇಲೆ ಕಲ್ಲು ತೂರಿ,ಟಿವಿ,ಮನೆ ಗಾಜು ಒಡೆದು ಪುಂಡಾಟ ಮೆರೆಯಲಾಗಿದೆ.

ಜಗಳ ಬಿಡಿಸಲು ಹೋದ ಪೊಲೀಸರ್ ಮೇಲೂ ಹಲ್ಲೆ ಮಾಡಿ ಯುವಕರು ಪರಾರಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಯಮಕನಮರಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಮಕನಮರಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.