ಹುಕ್ಕೇರಿ : ಇತ್ತಿಚೇಗಷ್ಟೇ ಹೀರಣ್ಯಕೇಶಿ ಆಡಳಿತ ಮಂಡಳಿ ಸದಸ್ಯರು ಕತ್ತಿ ಕುಟುಂಬದ ಕೈ ಬಿಟ್ಟು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬೆಂಬಲಿಸಿ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಆಡಳಿತ ಚುಕ್ಕಾಣಿಯನ್ನ ಕತ್ತಿ ಕುಟುಂಬದಿಂದ ಕಸಿದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 11 ಜನ ಸದಸ್ಯರು ಕತ್ತಿ ಕುಟುಂಬದ ಬೆಂಬಲಿತ ಹಾಲಿ ಅಧ್ಯಕ್ಷ ಕಲಗೌಡ ಪಾಟೀಲ ವಿರುದ್ಧ ನಾಳೆ ಅವಿಶ್ವಾಸ ಮಂಡನೆ ಮಾಡಲಿದ್ದಾರೆ. 10 ದಿನಗಳ ಬಳಿಕ ನೂತನ ಅಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಸಂಘದ ಸದಸ್ಯರಾದ ಅಶೋಕ ಚಂದಪ್ಪಗೋಳ, ಕುನಾಲ ಪಾಟೀಲ, ಜಯಗೌಡ ಪಾಟೀಲ, ರವಿ ಹಿಡಕಲ್, ಬಸಗೌಡ ಮಗೆಣ್ಣವರ, ಸೋಮಲಿಂಗ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೋದೆ, ವಿಷ್ಣು ರೇಡೆಕರ ಸೇರಿ ಒಟ್ಟು 10 ಜನ ಸಂಘದ ಸದಸ್ಯರು ಅವಿಶ್ವಾಸ ಮಂಡನೆ ಮಾಡಲಿದ್ದಾರೆ.

ಕಳೆದ ಹಲವು ದಿನಗಳಿಂದ ಬೆಳಗಾವಿಯ ಖಾಸಗಿ ಹೊಟೇಲದಲ್ಲಿ ಬೀಡು ಬಿಟ್ಟಿರುವ 10 ಜನ ಸದಸ್ಯರು ನಾಳೆ 11 ಗಂಟೆಗೆ ಹುಕ್ಕೇರಿ ಪಟ್ಟಣದಲ್ಲಿರುವ ವಿದ್ಯುತ್ ಸಹಕಾರಿ ಸಂಘದ ಕಚೇರಿಗೆ ಆಗಮಿಸಿ ಹಾಲಿ ಅಧ್ಯಕ್ಷ ಕಲಗೌಡ ಪಾಟೀಲ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಿದ್ದಾರೆ.

ಇಂದು ಕೂಡ ಬೆಳಗಾವಿಯ ಖಾಸಗಿ ಹೊಟೇಲನಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಸಂಘದ ಸದಸ್ಯರ ಜೊತೆಗೆ ಮಹತ್ವದ ಸಭೆ ನಡೆಸಲಾಗಿದೆ.

15 ಜನ ಚುನಾಯಿತ ಸದಸ್ಯ ಬಲ ಹೊಂದಿರುವ ಸಂಘಕ್ಕೆ 10 ಜನ‌ ನಿರ್ಣಾಯಕ ಸದಸ್ಯರೇ ನಿರ್ಣಾಯಕ. ಪ್ರಮುಖವಾಗಿ ಇಲ್ಲಿ ಗಮನಿಸಬೇಕೆಂದರೇ ಕತ್ತಿ ಕುಟುಂಬದಿಂದ ಅಧಿಕಾರ ಅನುಭವಿಸಿದವೇ ಈಗ ಕತ್ತಿ ಕುಟುಂಬ ವಿರುದ್ಧ ಹೋಗಿರುವದು.

ಅಧಿಕಾರ ಉಳಿಸುಕೊಳ್ಳಲು ಮಾಜಿ ಸಂಸದ ರಮೇಶ ಕತ್ತಿ ಹಲುವು ದಿನಗಳಿಂದ ಪ್ರಯತ್ನ‌ ನಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ‌. ಸಚಿವ ಸತೀಶ ಜಾರಕಿಹೊಳಿ ಬೆಂಬಲಿತ 5 ಜನ ಸದಸ್ಯರೇ ಇಲ್ಲಿ ನಿರ್ಣಾಯಕವಾಗಿದ್ದು ನಾಳೆ ಸತೀಶ ಜಾರಕಿಹೊಳಿ‌ ಯಾರ ಪರ ನಿಲ್ಲಲಿದ್ದಾರೆ ಎನ್ನುವದನ್ನ ಕಾಯ್ದು ನೋಡಬೇಕಿದೆ.