ರಾಯಬಾಗ: ಮೈಕ್ರೋ ಫೈನಾನ್ಸ್ ನಿಂದ ಸೀಜ್ ಆಗಿದ್ದ ಮನೆಯ ಬೀಗ್ ಮುರಿದು ಕುಟುಂಬಸ್ಥರಿಗೆ ರೈತ ಸಂಘದ ಮುಖಂಡರು ಮನೆ ಹಸ್ತಾತಂರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.

ನಾಗರಾಳ ಗ್ರಾಮ ನಿವಾಸಿ ರಾಮದೇವ್ ಲಕ್ಷ್ಮಣ ದಾವಣಿ ಎಂಬುವರಿಗೆ ಸೇರಿದ್ದ ಮನೆಯನ್ನ ಖಾಸಗಿ ಫೈನಾನ್ಸ್ ಕಂಪನಿ ಅವರ ಸಾಲ ತುಂಬದ ಕಾರಣ ಸೀಜ್ ಮಾಡಿ ಮನೆಗೆ ಬೀಗ ಹಾಕಿದ್ದರು.
ಮನೆಯಿಲ್ಲದೆ ಬೀದಿ ಪಾಲಾಗಿದ್ದ ಕುಟುಂಬದ ಪರಿಸ್ಥಿತಿ ಮನಗಂಡು ಫೈನಾನ್ಸ್ ವಿರುದ್ಧ ಸಿಡಿದೆದ್ದ ರೈತ ಸಂಘದ ಮುಖಂಡರು ಮನೆಗೆ ಹಾಕಿದ್ದ ಬೀಗ್ ಒಡೆದು ರಾಮದೇವ್ ಪತ್ನಿಗೆ ಮನೆ ಹಸ್ತಾಂತರ ಮಾಡಿದರು. ಅಲ್ಲದೇ ಖಾಸಗಿ ಫೈನಾನ್ಸ್ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
