ಹುಕ್ಕೇರಿ: ತೋಳದ ದಾಳಿಗೆ 14 ಕುರಿ ಮರಿಗಳು ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ತುದಿಮಾಳ ತೋಟದ ವಲಯದಲ್ಲಿ ನಡೆದಿದೆ.
ಶಂಕರ್ ಯಲ್ಲಪ್ಪ ನಾಯಕ ಹಾಗೂ ದುಂಡಪ್ಪ ಬಾಬು ನಾಯಕ ಅವರಿಗೆ ಸೇರಿದ 14 ಕುರಿ ಮರಿಗಳನ್ನು ತೋಳ ಬಲಿ ಪಡದಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ರಮೇಶ್ ಕಮತಿ, ಪಶು ವೈದ್ಯಾಧಿಕಾರಿ ಡಾ.ಮಲ್ಲಪ್ಪ ತಳವಾರ, ಕುರಿಗಾರರ ಸಂಘದ ಅಧ್ಯಕ್ಷ ಶಂಕರ್ ಹೆಗಡೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕುರಿಗಾರರಾದ ಶಂಕರ್ ನಾಯಕ್ ಹಾಗೂ ದುಂಡಪ್ಪ ನಾಯಕ್ ಅವರಿಗೆ ಸೇರಿದ 14 ಕುರಿ ಮರಿಗಳನ್ನು ತೋಳ ಬಲಿ ಪಡದಿದಿದ್ದು, ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ ಎಂದು ಹುಕ್ಕೇರಿ ತಾಲೂಕ ಅರಣ್ಯ ಇಲಾಖೆ ಅಧಿಕಾರಿ ಬಿ ಎಲ್ ಸನದಿ ತಿಳಿಸಿದ್ದಾರೆ.