ಹುಕ್ಕೇರಿ: ಜಮ್ಮು ಕಾಶ್ಮೀರದ ಪಹಲಗಾಮ ದಲ್ಲಿ ನಡೆದ ಉಗ್ರರ ಅಟ್ಟಹಾಸ ಖಂಡಿಸಿ ಇಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.

ಪಟ್ಟಣದ ಕೋರ್ಟ್ ವೃತ್ತದಲ್ಲಿ ಜಮಾಯಿಸಿದ ನೂರಾರು ವಕೀಲರು ವೃತ್ರದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಉಗ್ರವಾದಿಗಳು ಹಾಗೂ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ನ್ಯಾಯವಾದಿ ಸಂಘದ ಅಧ್ಯಕ್ಷ ಕೆ.ಬಿ ಕುರಬೇಟ ಮಾತನಾಡಿ,ಜಮ್ಮು ಕಾಶ್ಮೀರಿನ ಸೌಂದರ್ಯ ಸವಿಯಲು ಹೊಗಿದ್ದ ಅಮಾಯಕರನ್ನ ಭಯೋತ್ಪಾದಕರು ಅಮಾನವೀಯವಾಗಿ ಕೊಂದು ಹಾಕಿದ್ದಾರೆ. ಅಮಾಯಕರನ್ನ ಬಲಿ ಪಡೆದ ಹಂತಕ ಭಯೋತ್ಪಾದಕ ಸಂಘಟನೆಗಳನ್ನು ನಮ್ಮ ಭೂಪಟದಲ್ಲಿ ಇಲ್ಲದಂತೆ ಮಾಡಬೇಕು. ಹಂತಕ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕ್ರಮ ಜರುಗಿಸಬೇಕು ಹಾಗೂ ಸಾವನ್ನಪ್ಪಿರುವ ಕುಟುಂಬಗಳಿಗೆ ಕೇಂದ್ರ ಸರಕಾರ ಪರಿಹಾರ ಘೋಷಿಸುವಂತೆ ಒತ್ತಾಯಿಸಿದರು.

ನ್ಯಾಯವಾದಿ ಸಂಘದ ಸಹ ಕಾರ್ಯದರ್ಶಿ ವಿಠ್ಠಲ ಘಸ್ತಿ, ಖಜಾಂಜಿ ಅಂಬರೀಶ್ ಬಾಗೇವಾಡಿ, ನ್ಯಾಯವಾದಿ ಸಂಘದ ಮಾಜಿ ಅಧ್ಯಕ್ಷ ಅನೀಸ್ ವಂಟಮೂರಿ,ರಾಮಚಂದ್ರ ಜೋಶಿ, ಪ್ರಕಾಶ ಮುತಾಲಿಕ, ಪಿ ಎಸ್ ಪಾಟೀಲ, ಪವನ ಮನಗೂಳಿ, ವಿನಯಗೌಡಾ ಪಾಟೀಲ, ಭೀಮಸೇನ ಬಾಗಿ,ಮಹಾಂತೇಶ ಬೊರಗಲ್ಲಿ, ಬಿ,ಎಂ ಜಿನರಾಳಿ, ಬಿ ವಿ ಹುಂಡೇಕರ, ಆಶಾ ಸಿಂಗಾಡೆ, ಎ ಬಿ ಕುಲಕರ್ಣಿ, ಎಸ್ ಎಸ್ ಸಿಲೆನವರಮಠ ಸೇರಿದಂತೆ ಹಲವರು ಭಾಗಿಯಾಗಿದ್ದರು.