ಕಾಗವಾಡ: ದೇಶದಲ್ಲಿ ಅಲ್ಪಸಂಖ್ಯಾತರಲ್ಲಿ ಆರು ಸಮುದಾಯಗಳಿದ್ದು, ಸರಕಾರಗಳು ಕೇವಲ ಮುಸ್ಲಿಂ ಸಮಾಜವನ್ನು ತುಷ್ಠಿಕರಿಸುತ್ತಿದೆ ಎಂದು ಜೈನಮುನಿ ಗುಣದರನಂದಿ ಮಹರಾಜರು ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ನಡೆಯುತ್ತಿರುವ ಜೈನ ಸಮಾವೇಶದಲ್ಲಿ ಮಾತನಾಡಿದ ಅವರು, ಸರಕಾರ ಜೈನ ಸಮಾಜವನ್ನು ನಿರ್ಲಕ್ಷ್ಯಸುತ್ತಿದೆ.‌

ನಿಗಮ ಮಂಡಳಿ ಸ್ಥಾಪನೆ ಜೊತೆಗೆ ನಮ್ಮ ನ್ಯಾಯಯುತ ಬೇಡಿಕೆಗಳನ್ನ ಈಡೇರಿಸದಿದ್ದರೆ ನನ್ನ ಉಗ್ರ ನಿರ್ಧಾರವನ್ನು ಅದೇ ವೇದಿಕೆಯಲ್ಲಿ ತಿಳಿಸಿಲಾಗುವುದು ಎಂದು ಎಚ್ಚರಿಸಿದರು.

ರವಿವಾರದಂದು ನಡೆಯುವ ಕೊನೆಯ ದಿನದ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥವರಚಂದ ಗೆಹ್ಲೋತ‌,ಹಲವು ಸಚಿವರು,ಶಾಸಕರು ಭಾಗಹಿಸಲಿದ್ದಾರೆ ಎಂದು ತಿಳಿಸಿದರು.