ಹುಕ್ಕೇರಿ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರೀತವಾಗಿ ವಿಲೆವಾರಿ ಮಾಡಿ ಕಕ್ಷಿದಾರರಿಗೆ ನ್ಯಾಯ ಒದಗಿಸಲಾಗಿವುದು ಎಂದು ನೂತನ ಕಿರಿಯ ನ್ಯಾಯಾಧೀಶ ಗುರು ಪ್ರಸಾದ ಹೇಳಿದರು.
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ನ್ಯಾಯಾಲಯದ ಇ-ಗ್ರಂಥಾಲಯದಲ್ಲಿ ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ವತಿಯಿಂದ ಅಯೋಜಿಸಿದ ನೂತನ ನ್ಯಾಯಾಧೀಶ ಗುರು ಪ್ರಸಾದ ರವರಿಗೆ ಸ್ವಾಗತ ಹಾಗೂ ನಿರ್ಗಮಿತ ಪ್ರಭಾರಿ ನ್ಯಾಯಾಧೀಶ ನೇಮಚಂದ್ರ ರವರಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ನಾನು ಆದಷ್ಟು ಬೇಗ ನ್ಯಾಯಾಲಯದಲ್ಲಿಯ ಪ್ರಕರಣಗಳನ್ನ ಕಡಿಮೆ ಮಾಡುತ್ತೇನೆ.
ಎಲ್ಲ ನ್ಯಾಯವಾದಿಗಳ ಸಹಕಾರದೊಂದಿಗೆ ಬರುವ ದಿನಗಳಲ್ಲಿ ತ್ವರಿತವಾಗಿ ನ್ಯಾಯ ದೊರಕಿಸುವ ಪ್ರಯತ್ನ ಮಾಡೊಣ ಎಂದರು.
ವಕೀಲ ಸಂಘದ ಅದ್ಯಕ್ಷ ಕೆ ಬಿ ಕುರಬೇಟ ಮಾತನಾಡಿದರು. ಹಿರಿಯ ನ್ಯಾಯವಾದಿಗಳಾದ ಪಿ ಆರ್ ಚೌಗಲಾ, ಎಮ್ ಎಮ್ ಪಾಟೀಲ, ಬಿ ಆರ್ ಚಂದರಗಿ,ಸೇರಿದಂತೆ ಇತರರು ನೂತನ ನ್ಯಾಯಾಧೀಶರಿಗೆ ಮತ್ತು ನಿರ್ಗಮಿಸುತ್ತಿರುವ ನ್ಯಾಯಾಧೀಶರಿಗೆ ಸತ್ಕರಿಸಿ ಅಭಿನಂದಿಸಿದರು.
ವೇದಿಕೆ ಮೇಲೆ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ, ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಬಿ ಎಮ್ ಜಿನರಾಳಿ, ಅಪರ ಸರಕಾರಿ ವಕೀಲ ಅನಿಲ ಕರೋಶಿ, ಕಾರ್ಯದರ್ಶಿ ಎಸ್ ಜೆ ನದಾಫ್, ವಿಠ್ಠಲ ಘಸ್ತಿ, ಎ ಎ ಬಾಗೆವಾಡಿ,ನಾಗರತ್ನಾ ಗುರುಪ್ರಸಾದ, ಅನಿತಾ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.