ಚಿಕ್ಕೋಡಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆ‌ರ್ ಸಿಬಿ) ತಂಡವು ಅಂತಿಮ ಪಂದ್ಯವನ್ನು ಗೆದ್ದು ತಮ್ಮ ಮೊದಲ ಕಪ್ ಗೆಲ್ಲುತ್ತದೆ ಎಂದು ಕೋಟ್ಯಾಂತರ ಜನ ಅಭಿಮಾನಗಳು ಆಶೀಸುತ್ತಿದ್ದಾರೆ. ಇದರ ನಡುವೆ ಇಂದು ನಡೆಯುವ ಪೈನಲ್ ಪಂದ್ಯದಲ್ಲಿ ಆರ್ ಸಿ ಬಿ ಗೆದ್ದರೆ ವಡಾಪಾವ್ ನೋಡುವುದಾಗಿ ಅಭಿಮಾನಿಗಳು ಘೋಷಿಸಿದ್ದಾರೆ.

ಐಪಿಎಲ್ 18 ನೇ ಸಿಸನ್ ನಲ್ಲಿ ಆರ್ ಸಿ ಬಿ ತಂಡ ಪೈನಲ್ ಪ್ರವೇಶವ ಮಾಡಿದೆ. ಎಲ್ಲ ಅಭಿಮಾನಿಗಳು ಇಂದು ಪಂಜಾಬ್ ತಂಡವನ್ನ ಸೋಲಿಸಿ ಆರ್ ಸಿ ಬಿ ಕಪ್ ಎತ್ತಿ 18 ವರ್ಷಗಳ ಕನಸು ನನಸಾಗಿಸಲೆಂದು ಹಾರೈಸುತ್ತಿದ್ದು, ಚಿಕ್ಕೋಡಿ ತಾಲೂಕಿನ ಅಂಕಲಿಯ ಅಭಿಮಾನಿಯೊಬ್ಬರು ಇಂದು ಆರ್‌ಸಿಬಿ ಕಪ್ ಗೆದ್ದರೆ ಬುಧವಾರ 4 ರಂದು ಸಂಜೆ 4 ರಿಂದ ರಾತ್ರಿ 8 ರವರೆಗೆ ತಮ್ಮ ಶ್ರೀ ಮಹಾಲಕ್ಷ್ಮೀ ವಡಾಪಾವ್ ಸೆಂಟರ್‌ನಲ್ಲಿ ಉಚಿತ ವಡಾಪಾವ್ ನೀಡುವುದಾಗಿ ನಾಗೇಶ್ ಮಂಗುಟಿ ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತರೂ ಆಗಿರುವ ನಾಗೇಶ ತಮ್ಮ ನೆಚ್ಚಿನ ತಂಡದ ಮೇಲಿನ ಪ್ರೀತಿ ವ್ಯಕ್ತಪಡಿಸಲು ಈ ಘೋಷಣೆ ಮಾಡಿ ಅಭಿಮಾನ ಮೇರೆದಿದ್ದಾರೆ.

ಅಹಮದಾಬಾದ್’ನಲ್ಲಿ ಇಂದು ಸಂಜೆ 7:30 ಕ್ಕೆ ಪಂಜಾಬ್ ವಿರುದ್ದ ನಮ್ಮ ಬೆಂಗಳೂರು ತಂಡ ಪೈನಲ್ ಪಂದ್ಯ ಆಡಲಿದೆ.