ಹುಕ್ಕೇರಿ: ಕಳೇದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಸಂಕೇಶ್ವರ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

01/05/1996 ರಂದು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ದ ಜಾತಿ ನಿಂಧನೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿತ್ತು.ಆರೂ ಜನ ಆರೋಪಿಗಳನ್ನ ನ್ಯಾಯಲಯಕ್ಕೆ ಹಾಜರು ಪಡಿಸಿ ವಿಚಾರಣೆಯಲ್ಲಿದ್ದಾಗ ಪ್ರಕರಣದ 6 ನೇ ಆರೋಪಿ ನಿಯಾಜ ಅಹ್ಮದ ಸಾಹೇಬಲಾಲ ಪೀರಜಾದೆ ಎಂಬುವನು ಅಲ್ಲಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ.

ಆರೋಪಿ ಪತ್ತೆಗೆ ಗೋಕಾಕ್ ಡಿ.ಎಸ್.ಪಿ ರವಿ ಡಿ ನಾಯ್ಕ್ ಹಾಗೂ ಸಂಕೇಶ್ವರ ಪಿಐ ಎಸ್.ಎಮ್. ಅವಜಿ ಇವರ ಮಾರ್ಗದರ್ಶನದಲ್ಲಿ ಪಿಎಸ್ಐ ಯು.ಎಸ್ ಶೆಟ್ಟೆನ್ನವರ ಹಾಗೂ ಸಿಬ್ಬಂದಿಗಳಾದ ಎಸ್.ಆರ್ ಬೇವಿನಕಟ್ಟಿ, ಎಸ್. ಎಸ್. ಗಳತಗಿ. ಇವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿಸಲಾಗಿತ್ತು. ಪೊಲೀಸ್ ಸಿಬ್ಬಂದಿಗಳ ಸತತ ಪ್ರಯತ್ನದಿಂದ 29 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ನಿಯಾಜ ಅಹ್ಮದ ಸಾಹೇಬಲಾಲ ಪೀರಜಾದೆಯನ್ನು ಸಂಕೇಶ್ವರ ಪೊಲೀಸರು ಪತ್ತೆ ಹಚ್ಚಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೊಳ ತಾಲ್ಲೂಕಿನ ಔರವಾಡ ಗ್ರಾಮದಲ್ಲಿ ಗುರುವಾರದಂದು ಬಂಧಿಸಿ ಸಂಕೇಶ್ವರ ನ್ಯಾಯಾಲಯಕ್ಕೆ ಹಾಜರ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಶ್ಲಾಘಿಸಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
