ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ತಿರುಪತಿ ತಿರುಮಲದ ವೆಂಕಟರಮಣ(ತಿಮ್ಮಪ್ಪ) ದೇವಾಲಯಕ್ಕೆ ಐಪಿಎಲ್‌ನ ಲಕ್ನೋ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿ ಮಾಲೀಕ ಸಂಜೀನ್‌ ಗೊಯೆಂಕ 3.63 ಕೋಟಿ ಮೌಲ್ಯದ 5 ಕೆ.ಜಿ ಚಿನ್ನಾಭರಣವನ್ನು ದೇವರಿಗೆ ದಾನ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಘ್ನತೆ ಕಾರಣದಿಂದ ಐಪಿಎಲ್​ ಪಂದ್ಯಾವಳಿಯನ್ನು ಕೆಲದಿನಗಳ ಕಾಲ ಮುಂದೂಡಲಾಗಿತ್ತು. ಇದೀಗ ಎರಡು ದೇಶಗಳ ನಡುವೆ ಕದನ ವಿರಾಮ ಜಾರಿಯಾದ ಕಾರಣ ಐಪಿಎಲ್​ ಇಂದಿನಿಂದ (ಮೇ,17) ಪುನರಾಂಭವಾಗುತ್ತಿದೆ. ಈ ನಡುವೆ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಇಂದು ಭಾರತದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ನೀಡಿದ್ದಾರೆ.

ಈ ದಾನವನ್ನು ತಿರುಪತಿ ದೇವಸ್ಥಾನದ ರಂಗನಾಯಕುಲ ಮಂಟಪದಲ್ಲಿ ನಡೆದ ಉಪಚಾರಿತವಾದ ಸಮಾರಂಭದಲ್ಲಿ ನೀಡಲಾಯಿತು, ಇದರಲ್ಲಿ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚಿ.ವೆಂಕಯ್ಯ ಚೌದರಿ ಭಾಗವಹಿಸಿದ್ದರು.

ಸಂಜೀನ್‌ ಗೊಯೆಂಕ ಅವರು ಚಿನ್ನಾಭರಣವನ್ನು ದಾನ ನೀಡುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.