ರಾಯಬಾಗ: ಮಹಾರಾಷ್ಟ್ರದ ಪುಣೆಯ ಇಂದ್ರಾಣಿ ನದಿಯ ಮೇಲ್ಸೆತುವೆ ಕುಸಿದು ದುರಂತದಲ್ಲಿ ವೀಕೆಂಡ್ ಮಸ್ತಿಗಾಗಿ ಇಂದ್ರಾಣಿ ನದಿ ದಡಕ್ಕೆ ಹೋಗಿದ್ದ ಕರ್ನಾಟಕ ಮೂಲದ ಟೆಕ್ಕಿ ಸಾವನ್ನಪ್ಪಿದ್ದಾರೆ‌.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಸಲಾಪುರ ಗ್ರಾಮದ ಯುವಕ ದುರಂತದಲ್ಲಿ ಸಾವನ್ನಪ್ಪಿದ್ದಾ‌ನೆ. ನಸಲಾಪುರ ಗ್ರಾಮದ ಚೇತನ ಚಾವರೇ (22) ಸೇತುವೆ ದುರಂತದಲ್ಲಿ ಮೃತಪಟ್ಟ ಯುವಕ. ದುರ್ಘಟನೆಯಲ್ಲಿ 25 ಕ್ಕೂ ಅಧಿಕ ಕೊಚ್ಚಿ ಹೋಗಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಆರು ಜನ ಶವ ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಹಾ ಸರ್ಕಾರ ಹಸ್ತಾಂತರ ಮಾಡಿದೆ.

ಚೇತನ ಚೇವರಿ ಕೂಡ ದುರ್ಘಟನೆಯಲ್ಲಿ ಮೃತನಾಗಿದ್ದು ಬೆಳಗಿನ ಜಾವ ನಸಲಾಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು‌. ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ ಚೇವರಿ ಸ್ನೇಹಿತರ ಜೊತೆಗೆ ಭಾನುವಾರ ಬೆಳಗ್ಗೆ ಇಂದ್ರಾಣಿ ನದಿ ವೀಕ್ಷಣೆಗೆ ತೆರಳಿದ್ದ. ಮೇಲ್ಸೆತುವೆ ಕುಸಿದು ಕೊಚ್ಚಿಕೊಂಡು ಹೋಗಿದ್ದ ಚೇತನ ಶವವಾಗಿ ಪತ್ತೆಯಾಗಿದ್ದಾನೆ.