ಹುಕ್ಕೇರಿ : ಅಣ್ಣ ಹೆಚ್ಚು ಸಂಪಾದನೆ ಮಾಡಿ ಬೆಳವಣಿಗೆ ಆಗುವದನ್ನ ಸಹಿಸದೇ ಸ್ವಂತ ತಮ್ಮ ಅಣ್ಣನನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ ಯಾರಿಗೂ ಸಂಶಯ ಬರದಂತೆ ಯಾಮಾರಿಸಿದ್ದ ಖತರನಾಕ ತಮ್ಮನನ್ನ ಯಮಕನಮರಡಿ ಪೊಲೀಸರು ಬಂಧಿಸುವಲ್ಲಿ ಯಶಸ್ಬಿಯಾಗಿದ್ದಾರೆ.

ಹುಕ್ಕೇರಿ ತಾಲೂಕಿನ‌ ಪಾಶ್ಚಾಪೂರ ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸುವಾಗ ಹಟ್ಟಿ ಆಲೂರು ಗ್ರಾಮದ ರಾಯಪ್ಪ ಸುರೇಶ ಕಮತಿ ( 28 ) ಎಂಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ‌ ಮಾಡಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡ ಯಮನಕನಮರಡಿ ಪಿಐ ಜಾವೇದ ಮುಶಾಪುರೆ ಹಾಗೂ ಅವರ ತಂಡ ಕೊಲೆ ಪ್ರಕರಣ ಬೇಧಿಸಿದ್ದೇ ರೋಚಕ. ಒಂದು ತಿಂಗಳು ಕುಲುಂಕುಷ ತನಿಖೆ ಬಳಿಕ ಪೊಲೀಸರಿಗೆ ಗೊತ್ತಾಗಿದ್ದು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಸ್ವತಃ ರಾಯಪ್ಪ ನ ಒಡಹುಟ್ಟಿದ ಸಹೋಧರ ಬಸವರಾಜ ಸುರೇಶ ಕಮತಿ (22) ಎಂಬುವದು.

ಸ್ವತಃ ತಮ್ಮ ಕೊಲೆ ಮಾಡಲು ಹೇಗೆ ಸಾಧ್ಯ ಎಂದು ಮೊದ ಮೊದಲು ಪೊಲೀಸರು ಈತನ ಬಗ್ಗೆ ಹಗುರವಾಗಿ ತಿಳಿದಿದ್ದರು. ಕೊಲೆ ಮಾಡುವಾಗ ಕೊಲೆಗಾರನ ಮೊಬೈಲ್ ಫೋನ ಕೂಡ ಮನೆಯಲ್ಲಿತ್ತು. ಮನೆಯಲ್ಲಿ ಫೋನ್ ಇಟ್ಟು ಕೊಲೆ ಮಾಡಿದ ಕಾರಣ ಯಾವುದೇ ಟೆಕ್ನಿಕಲ್ ಎವಿಡಿನ್ಸ್ ಸಿಕ್ಕಿರಲಿಲ್ಲ‌. ಕೊಲೆಗಾರ ಚಾಪೆ ಕೆಳಗೆ ನುಗ್ಗಿದ್ದರೇ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಕೊಲೆಗಾರನನ್ನ ಬಂಧಿಸಿದ್ದಾರೆ. ಕೊಲೆಗಾರ ಬಸವರಾಜ ಕೊಲೆ ಮಾಡಿ ಮನೆಗೆ ಬಂದ ಆರಾಮಾಗಿ ಯಾವುದೇ ಸಂಶಯ ಬಾರದಂತೆ ಇದ್ದ. ಆದರೆ ಯಾವಾಗ ಈತ ತನ್ನ ಅಣ್ಣನ ಹುಡಿಕಲು ಹೇಳಿದಾಗ ಅಣ್ಣನ ಮೊಬೈಲಗೆ ಕೇವಲ ಒಂದೇ ಕರೆ ಮಾಡಿ ಸುಮ್ಮನ್ನಿದ್ದ. ಇಲ್ಲೆ ನೋಡಿ ಪೊಲೀಸರಿಗೆ ಸಂಶಯ ಬಂದಿದ್ದು ಅಣ್ಣನ ಹುಡುಕಬೇಕಿದ್ದರೆ ಸತತವಾಗಿ ಆತನ ಮೊಬೈಲ್ ಕರೆ ಮಾಡಬೇಕಿದ್ದ ತಮ್ಮ ಒಂದೇ ಬಾರಿ ಕರೆ ಮಾಡಿದ್ದನ್ನ ಗಮನಿಸಿದ ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಕೊಲೆಗಾರನ ಸತ್ಯ ಬಯಲಿಗೆ ಬಂದಿದೆ. ಅಣ್ಣ ಹೆಚ್ಚು ದುಡಿದು ಹೆಚ್ಚು ಸಂಪಾದನೆ ಮಾಡಿದ್ದನ್ನ ಸಹಿಸದೇ ಕೊಲೆ ಮಾಡಿರುವದಾಗಿ ತಮ್ಮ ಬಸವರಾಜ ಒಪ್ಪಿಕೊಂಡಿದ್ದಾನೆ.

ಯಮಕನಮರಡಿ ಇನ್ಸಪೆಕ್ಟರ್ ಜಾವೇದ ಮುಶಾಪುರೆ ಹಾಗೂ ತನಿಖಾ ತಂಡದ ಕಾರ್ಯ ವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.