ಹುಕ್ಕೇರಿ: 2024-25 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹುಕ್ಕೇರಿಯ ಬಡ ಕೂಲಿ ಕಾರ್ಮಿಕ ಮಹಾಂತೇಶ ಪುಂಡಲಿಕ ನಾಯಿಕ ಅವರ ಮಗ ಪ್ರಜ್ವಲ್ ಶೇ.92 ರಷ್ಟು ಅಂಕ ಪಡೆದು ಹೆತ್ತವರ ಹಾಗೂ ಪಟ್ಟಣದ ಹೆಸರು ತಂದಿದ್ದಾನೆ.

ಹುಕ್ಕೇರಿ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ರಾಣಿ ಚನ್ನಮ್ಮ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಡ ಕುಟುಂಬದ ವಿಧ್ಯಾರ್ಥಿ ಪ್ರಜ್ವಲ್ ಮಹಾಂತೇಶ ನಾಯಿಕ ಸತತ ಪರಿಶ್ರಮದಿಂದ ಶೇ. 92 ಪ್ರತಿಶತ ಅಂಕ ಪಡೆಯುವ ಮೂಲಕ ಶಾಲೆಗೆ ಎರಡನೇ ರ್ಯಾಂಕ್ ಬಂದಿದ್ದಾನೆ. ಇನ್ನೂ ಬಡ ವಿದ್ಯಾರ್ಥಿಯ ಸಾಧನೆಗೆ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಸೇರಿದಂತೆ ಹುಕ್ಕೇರಿಯ ಹಿರಿಯರು ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.ಬಡ ಕುಟುಂಬದಿಂದ ಬಂದ ವಿಧ್ಯಾರ್ಥಿಯ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು, ವಿಧ್ಯಾರ್ಥಿ ಹೆಚ್ಚಿನ ವ್ಯಾಸಂಗ ಮಾಡಿ ಉನ್ನತ ಸ್ಥಾನಕ್ಕೆ ಎರಲಿ ಎಂಬುದು ಎಲ್ಲರ ಆಶಯವಾಗಿದೆ.