ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಮಹಾಂತೇಶ ಭೀಮಪ್ಪ ಹೂನ್ನೂರ ವಯಸ್ಸು 44 ವರ್ಷದ ಯುವಕ ಗುರುವಾರ ಸಂಜೆ ಸಾಲ ಬಾದೆ ತಾಳಲಾರದೆ ನೇಣಿಗೆ ಶರಣಾಗಿದ್ದಾರೆ.

1 ಎಕರೆ 30 ಗುಂಟೆ ಜಮೀನು ಹೊಂದಿರುವ ರೈತ ವಿವಿಧ ಖಾಸಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು, ಪೈನಾನ್ಸ್, ಕೈಗಡ ಸೇರಿದಂತೆ 28 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಡಿರುವ ಸಾಲ ಹೇಗೆ ತೀರಿಸುವುದು ಎಂಬ ಆತಂಕದಲ್ಲಿದ್ದ ರೈತ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನೇಣಿಗೆ ಕೊರಳೊಡ್ಡಿದ್ದಾರೆ. ಮೃತರು ಪತ್ನಿ, ತಾಯಿ, ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಈ ಕುರಿತು ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.